CrimeDistricts

ಎಣ್ಣೆ ಪಾರ್ಟಿ ಮಾಡಿ ಪರಸ್ಪರ ಬಡಿದಾಡಿಕೊಂಡ KPTCL ಎಂಜಿನಿಯರ್‌ಗಳು!

ತುಮಕೂರು; ಕೆಲಸಕ್ಕೆ ಬಂಕ್‌ ಮಾಡಿದ ನಾಲ್ವರು ಕೆಪಿಟಿಸಿಎಲ್‌ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿದ್ದಾರೆ.. ಕಂಠಪೂರ್ತಿ ಕುಡಿದು ತೂರಾಡಿದ್ದಾರೆ.. ಇದೇ ಸಮಯದಲ್ಲಿ ಯಾವುದೋ ವಿಚಾರಕ್ಕೆ ಜಗಳ ನಡೆದಿದ್ದು, ನಾಲ್ವರೂ ಬೀದಿಯಲ್ಲೇ ಬಡಿದಾಡಿಕೊಂಡಿದ್ದಾರೆ.. ಬಿಯರ್‌ ಬಾಟಲಿಗಳಿಂದ ಹೊಡೆದಾಡಿಕೊಂಡಿರುವುದರಿಂದ ಗಾಯಗಳಾಗಿ ರಕ್ತ ಸೋರಿದೆ.. ಯಾರೋ ಈ ಹೊಡೆದಾಟದ ವಿಡಿಯೋ ಮಾಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟ ವೈರಲ್‌ ಆಗುತ್ತಿದೆ..

ಪಾವಗಡ ಪಟ್ಟಣದ ಹೊರವಲಯದಲ್ಲಿ ಈ ಘಟನೆ ನಡೆದಿದೆ.. ಇತ್ತೀಚೆಗೆ ನಾಲ್ವರು ಬೆಸ್ಕಾಂ ಸಿಬ್ಬಂದಿ ಕೆಲಸಕ್ಕೆ ರಜೆ ಹಾಕಿ ಗುಂಡು ಪಾರ್ಟಿ ಮಾಡಿದ್ದಾರೆ.. ಈ ವೇಳೆ ಕುಡಿದು ಜಾಸ್ತಿಯಾಗಿ ಗಲಾಟೆ ಮಾಡಿಕೊಂಡಿದ್ದಾರೆ.. ತಲೆಗೆ ತೀವ್ರ ಗಾಯವಾಗಿ ರಕ್ತ ಸೋರುತ್ತಿದ್ದರೂ ಬಿಯರ್‌ ಬಾಟಲಿಗಳೊಂದಿಗೆ ಬಡಿದಾಡಿಕೊಂಡಿದ್ದಾರೆ.. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ..

ಕೆಪಿಟಿಸಿಎಲ್​​ನ ಇಬ್ಬರು ಜೂನಿಯರ್ ಎಂಜಿನಿಯರ್​​ಗಳು, ಇಬ್ಬರು ಬೆಸ್ಕಾಂ ಸಿಬ್ಬಂದಿಯ ನಡುವೆ ಈ ಬಡಿದಾಟ ನಡೆದಿದೆ ಎಂದು ತಿಳಿದುಬಂದಿದೆ. ಕೆಪಿಟಿಸಿಎಲ್ ಜೂನಿಯರ್ ಎಂಜಿನಿಯರ್​​ಗಳಾದ ಶ್ರೀನಿವಾಸ್, ವಾದಿರಾಜ್, ಬೆಸ್ಕಾಂ ಸಿಬ್ಬಂದಿ ನರಸಿಂಹಮೂರ್ತಿ ಮತ್ತು ಸಂತೋಷ್ ಎಂದು ಗುರುತಿಸಲಾಗಿದೆ.. ಕಳೆದ ಗುರುವಾರ ಈ ಘಟನೆ ನಡೆದಿದ್ದು, ಯಾರೋ ಈ ದೃಶ್ಯ ಚಿತ್ರೀಕರಿಸಿಕೊಂಡು ಈಗ ವೈರಲ್‌ ಮಾಡಿದ್ದಾರೆ..

ಬಡಿದಾಡಿಕೊಂಡರೂ ಯಾರೂ ಕೂಡಾ ಕಂಪ್ಲೇಂಟ್‌ ಕೊಟ್ಟಿಲ್ಲ.. ಕೆಲಸಕ್ಕೆ ತೊಂದರೆಯಾಗಬಹುದು ಎಂಬ ಉದೇಶದಿಂದ ಗಾಯಗಳಾಗಿದ್ದರೂ ಕೂಡಾ ಹಾಗೆಯೇ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.. ಸದ್ಯ ನಾಲ್ವರಿಗೂ ಮೇಲಧಿಕಾರಿಗಳು ನೋಟಿಸ್‌ ನೀಡಿ ಸಮಜಾಯಿಷಿ ಕೇಳಿದ್ದಾರೆ..

 

Share Post