CrimeNational

ಟಕಾರಿ ನಾಲೆಗೆ ಉರುಳಿತು ಕಾರು; ಒಂದೇ ಕುಟುಂಬದ 6 ಮಂದಿ ದುರ್ಮರಣ!

ಮಹಾರಾಷ್ಟ್ರ; ಮಹಾರಾಷ್ಟ್ರದಲ್ಲಿ ಭೀಕರ ರಸ್ತೆ ಅಪಘಾತ ನಡೆದಿದೆ.. ದುರಂತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.. ಇದರಲ್ಲಿ ಮೂವರು ಮಕ್ಕಳು ಕೂಡಾ ಸೇರಿದ್ದಾರೆ.. ಮಹಾರಾಷ್ಟ್ರದ ಸಾಂಗ್ಲಿ ಬಳಿ ಕಾರೊಂದು ನಾಲೆಗೆ ಉರುಳಿಬಿದ್ದು, ಈ ಭೀಕರ ದುರಂತ ನಡೆದಿದೆ..

ಮಂಗಳವಾರ ಮಧ್ಯರಾತ್ರಿ 12.30ರ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಆಲ್ಟೋ ಕಾರು ಚಿಂಚಣಿ ಪ್ರದೇಶದಲ್ಲಿರುವ ಟಕಾರಿ ನಾಲೆಗೆ ಉರುಳಿಬಿದ್ದಿದೆ.. ಇದರಿಂದಾಗಿ ಸಿವಿಲ್‌ ಎಂಜಿಯರ್‌ ಸೇರಿ ಅವರ ಕುಟುಂಬದ ಆರು ಮಂದಿ ಸಾವನ್ನಪ್ಪಿದ್ದಾರೆ.. ಒಬ್ಬರು ಮಗಳು ಮಾತ್ರ ಗಾಯಗಳೊಂದಿಗೆ ಬದುಕುಳಿದಿದ್ದಾರೆ..

ಸಿವಿಲ್​ ಇಂಜಿನಿಯರ್​ ಜಗನ್ನಾಥ್​ ಪಾಟೀಲ್​​ (60), ಜಗನ್ನಾಥ್‌ ಅವರ ಪತ್ನಿ ಸುಜಾತ ಪಾಟೀಲ್​ (55), ಪುತ್ರಿ ಪ್ರಿಯಾಂಕಾ ಖರಾಡೆ (30), ಮೊಮ್ಮಗಳು ಧ್ರುವ (3), ರಾಜೀವಿ(2) ಮತ್ತು ಕಾರ್ತಿಕಿ (1) ಸಾವನ್ನಪ್ಪಿದ್ದಾರೆ. ಮತ್ತೋರ್ವ ಪುತ್ರಿ ಸ್ವಪ್ನಾಲಿ(30) ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ..

 

Share Post