DistrictsPolitics

ಕಿಚ್ಚ ಸುದೀಪ್‌ ಭರ್ಜರಿ ರೋಡ್‌ ಶೋ; ಬಿಜೆಪಿ ಪರ ಪ್ರಚಾರ

ಚಿತ್ರದುರ್ಗ; ನಟ ಕಿಚ್ಚ ಸುದೀಪ್‌ ಇಂದು ಬಿಜೆಪಿ ಪರ ಪ್ರಚಾರಕ್ಕಿಳಿದಿದ್ದಾರೆ. ಇಂದು ಚಿತ್ರದುರ್ಗ, ದಾವಣಗೆರೆ ಸೇರಿದಂತೆ ಆರು ಕಡೆ ಪ್ರಚಾರ ನಡೆಸಲಿದ್ದಾರೆ. ಮೊದಲಿಗೆ ಅವರು ಮೊಳಕಾಲ್ಮೂರಿನಲ್ಲಿ ಪ್ರಚಾರ ನಡೆಸಿದ್ದಾರೆ.

ಮೊಳಕಾಲ್ಮೂರಿನಲ್ಲಿ ಭರ್ಜರಿ ರೋಡ್‌ ಶೋ ನಡೆಸಲಾಗಿದ್ದು, ಸಾವಿರಾರು ಜನರು ಸುದೀಪ್‌ ನೋಡಲು ಸೇರಿದ್ದಾರೆ. ಮೊಳಕಾಲ್ಮೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ತಿಪ್ಪೇಸ್ವಾಮಿ ಪರ ಪ್ರಚಾರ ಕೈಗೊಂಡಿದ್ದಾರೆ.

ಬಿಜೆಪಿಗೆ ಮತ ನೀಡಿ, ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಂತೆ ಸುದೀಪ್‌ ಅವರು ರೋಡ್‌ ಶೋನಲ್ಲಿ ಮನವಿ ಮಾಡಿದ್ದಾರೆ.

Share Post