Districts

ಧಾರವಾಡದಲ್ಲಿ ಸಾರಿಗೆ ಬಸ್‌ ಅಪಘಾತ – 9 ಮಂದಿಗೆ ಗಾಯ

ಧಾರವಾಡ : ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕಿನ ಕುಮಾರಗೊಪ್ಪ ಬಳಿ ಸಾರಿಗೆ ಬಸ್‌ ಅಪಘಾತಕ್ಕೊಳಗಾಗಿದೆ. ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಈ ಆಕ್ಸಿಡೆಂಟ್‌ ಸಂಭವಿಸಿದೆ.

ರೋಣ ಡಿಪೋದ ಗಾಡಿ ಇಂದು ಧಾರವಾಡದಿಂದ ರೋಣ ಕಡೆಗೆ ತೆರಳುತ್ತಿತ್ತು. ಈ ವೇಳೆ ನವಲಗುಂದ ಪಟ್ಟಣದ ಸಮೀಪ ಹೊರವಲಯದ ಕುಮಾರಗೋಪ್ಪ ಕ್ರಾಸ್‌ ಬಳಿ ಬೈಕ್‌ ಸವಾರ ಏಕಾಏಕಿ ಅಡ್ಡ ಬಂದಿದ್ದಾನೆ. ಬೈಕ್‌ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಬಸ್‌ ಚಾಲಕ ಯತ್ನಿಸಿದ್ದಾನೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಬಸ್‌ ರಸ್ತೆಯಿಂದ ಆಚೆಗೆ ನುಗ್ಗಿದೆ.

ಬಸ್‌ನಲ್ಲಿ 19 ಜನರು ಪ್ರಯಾಣಿಸುತ್ತಿದ್ದರು ಅದರಲ್ಲಿ 9 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ಕೊಟ್ಟು ಘಟನೆಯ ಮಾಹಿತಿ ಪಡೆಯುತ್ತಿದ್ದಾರೆ.

Share Post