CrimeDistricts

ಕನಕಪುರ ಟು ಯಾದಗಿರಿ ಲವ್‌ ಕಹಾನಿ; ಕೈಗೆ ಮಗು ಕೊಟ್ಟು ಮೋಸ ಮಾಡಿದ ಆಸಾಮಿ!

ಯಾದಗಿರಿ; ಅದು ಬೆಂಗಳೂರಿನಲ್ಲಿ ಆದ ಪರಿಚಯ. ಕನಕಪುರದ ಯುವತಿಗೂ ಯಾದಗಿರಿಯ ಯುವಕನಿಗೂ ಬೆಂಗಳೂರಿನಲ್ಲಿ 2014ರಲ್ಲಿ ಪ್ರೇಮಾಂಕುರವಾಗಿತ್ತು. ಆರು ವರ್ಷಗಳ ಹಿಂದೆ ಇಬ್ಬರಿಗೂ ಮದುವೆಯೂ ಆಗಿತ್ತು. ಈ ಜೋಡಿಗೆ ಈಗ ಮೂರವರೆ ವರ್ಷದ ಮಗನಿದ್ದಾನೆ. ಇದೀಗ ಯುವಕ ಬೇರೊಂದು ಯುವತಿಯನ್ನು ಮದುವೆಯಾಗಿದ್ದಾನೆ. ಹೀಗಾಗಿ ಮೊದಲ ಪತ್ನಿ ದಿಕ್ಕು ತೋಚದೆ ಮಗುವನ್ನು ಸೊಂಟದ ಮೇಲೆ ಇಟ್ಟುಕೊಂಡು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾಳೆ.

ಯಾದಗಿರಿಯ ಶರಣು ದೋರನಹಳ್ಳಿ ಎಂಬಾತ ಕನಕಪುರ ಮೂಲದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದ್ರೆ ಇತ್ತೀಚೆಗೆ ಆತ ಬೇರೊಬ್ಬಳನ್ನು ಮದುವೆಯಾಗಿದ್ದು, ತನ್ನನ್ನು ಹಾಗೂ ಮಗುವನ್ನೂ ದೂರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಮೊದಲ ಪತ್ನಿಗೆ ಡಿವೋರ್ಸ್‌ ನೀಡದೇ ಆತ ಎರಡನೆ ಮದುವೆಯಾಗಿದ್ದಾನಂತೆ. ಹೀಗಾಗಿ ಕನಕಪುರದ ಯುವತಿ ತನಗೆ ನ್ಯಾಯ ಕೊಡಿಸುವಂತೆ ಕಚೇರಿಯಿಂದ ಕಚೇರಿಗೆ ಅಲೆದಾಡುತ್ತಿದ್ದಾಳೆ.

ಆರೋಪಿ ಶರಣು ದೋರನಹಳ್ಳಿ ದಲಿತ ಸಂಘಟನೆಯ ಸ್ಥಳೀಯ ಮುಖಂಡನಂತೆ. ಯಾದಗಿರಿ ಜಿಲ್ಲೆಯ ಡಿಎಸ್ಎಸ್ ಸಂಘಟನೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶರಣು, ತನಗೆ ಮೋಸ ಮಾಡಿದ್ದಾನೆ ಎಂದು ಕನಕಪುರದ ಮಹಿಳೆ ಆರೋಪ  ಮಾಡುತ್ತಿದ್ದಾಳೆ.

 

Share Post