CrimeDistricts

ಕಡಿಮೆ ವೇಸ್ಟೇಜ್‌ನಲ್ಲಿ ಆಭರಣ ತಯಾರಿ; ಮೈಸೂರಿನಲ್ಲಿ ಮಾರಾಮಾರಿ

ಮೈಸೂರು; ಮೈಸೂರಿನಲ್ಲಿ ಚಿನ್ನ ತಯಾರಿಸುವ ಅಕ್ಕಸಾಲಿಗರ ನಡುವೆ ಮಾರಾಮಾರಿ ನಡೆದಿದೆ. ಕಡಿಮೆ ವೇಸ್ಟೇಜ್‌ನಲ್ಲಿ ಆಭರಣ ತಯಾರಿಸುತ್ತೇವೆಂದು ನೂತನ್‌ ಹಾಗೂ ಕುಟುಂಬಸ್ಥರು ಆಫರ್‌ ನೀಡಿದ್ದರು. ಇದರಿಂದ ರೊಚ್ಚಿಗೆದ್ದ ಇತರ ಅಕ್ಕಸಾಲಿಗರು ನೂತನ್ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ. ಯಾರನ್ನು ಕೇಳಿ ಬಿತ್ತಿಚಿತ್ರ ಹಂಚಿದೆ ಎಂದು ಅಟ್ಯಾಕ್ ಮಾಡಿದ್ದಾರೆ.

ಅಂಗಡಿಗೆ ನುಗ್ಗಿ ನೂತನ್‌ ಹಾಗೂ ಕುಟುಂಬದವರ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ.  ಆಭರಣ ತಯಾರಕರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆಂದು ಆರೋಪಿ ಸಲಾಗಿದೆ. ಮೈಸೂರಿನಲ್ಲಿ ಇರ್ವಿನ್ ರಸ್ತೆಯಲ್ಲಿ ಈ ಘಟನೆ‌ ನಡೆದಿದೆ.

 

Share Post