DistrictsLifestyle

ಹನುಮ ಮಾಲೆ ಧರಿಸಿದ ಜನಾರ್ದನರೆಡ್ಡಿ; ಅಂಜನಾದ್ರಿ ಬೆಟ್ಟಕ್ಕೆ ಭೇಟಿ

ಕೊಪ್ಪಳ; ಇಂದು ಹನುಮ ಜಯಂತಿ ಹಿನ್ನೆಲೆಯಲ್ಲಿ ಹನುಮ ಮಾಲೆ ವಿಸರ್ಜನೆ ಹಾಗೂ ಸಂಕೀರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಈ ಯಾತ್ರೆ ನಡೆಯುತ್ತಿದೆ. ಅದೇ ರೀತಿ ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲೂ ಈ ಯಾತ್ರೆ ನಡೆಯಲಿದೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ಗಣಿಧಣಿ ಜನಾರ್ದನರೆಡ್ಡಿ ಕೂಡಾ ಹನುಮ ಮಾಲೆ ಧರಿಸಿದ್ದಾರೆ. ಅವರೂ ಇಂದು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

ನಿನ್ನೆ ಗಂಗಾವತಿಯ ಆನೆಗುಂದಿ ಹಾಗೂ ಪಂಪ ಸರೋವರಕ್ಕೆ ಜನಾರ್ದನರೆಡ್ಡಿ ಆಗಮಿಸಿದ್ದರು. ರಾತ್ರಿ ಅಲ್ಲೇ ಉಳಿದುಕೊಂಡು ಇಂದು ಬೆಳಗಿನ ಜಾವ ಹನುಮ ಮಾಲೆ ಧರಿಸಿದ್ದಾರೆ. ಪಂಪ ಸರೋವರದಿಂದ ಜನಾರ್ದನರೆಡ್ಡಿಯವರು ಅಂಜನಾದ್ರಿ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಅಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಿದ್ದಾರೆ.

Share Post