DistrictsPolitics

ಅಕ್ಕಿ ಕೊಡೋಕೆ ಆಗದಿದ್ದರೆ ಅಧಿಕಾರ ಬಿಡಿ; ಶೋಭಾ ಕರಂದ್ಲಾಜೆ ಆಗ್ರಹ

ಚಿಕ್ಕಮಗಳೂರು; ಕೇಂದ್ರ ಸರ್ಕಾರದಿಂದ ಬಡವರಿಗೆ ತಲಾ ಐದು ಕೆಜಿ ಉಚಿತ ಅಕ್ಕಿ ನೀಡಲಾಗುತ್ತಿದೆ. ಕಾಂಗ್ರೆಸ್‌ನವರು ಹತ್ತು ಕೆಜಿ ಉಚಿತ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದಾರೆ. ಹಾಗಾದರೆ ಎಲ್ಲಾ ಸೇರಿಸಿ 15 ಕೆಜಿ ಅಕ್ಕಿ ಕೊಡಬೇಕು. ಅದನ್ನು ಕಾಂಗ್ರೆಸ್‌ ಸರ್ಕಾರ ಕೊಡಬೇಕು. ಕೊಡಲು ಆಗದಿದ್ದರೆ ಅಧಿಕಾರ ಬಿಟ್ಟು ತೊಲಗಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹ ಮಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದರು.

ಮೋದಿ ಸರ್ಕಾರ ಕೊಡುತ್ತಿರುವ ಅಕ್ಕಿ ಸೇರಿ ನೀವು 10 ಕೆಜಿ ಅಕ್ಕಿ ಕೊಡೊಲು ಹೊರಟಿದ್ದೀರಿ. ಆದ್ರೆ ಅದು ಹಾಗಲ್ಲ, ನೀವು ಹೇಳಿರೋದು ನೀವೇ ಹತ್ತು ಕೆಜಿ ಉಚಿತ ಅಕ್ಕಿ ಕೊಡ್ತೀವಿ ಅಂತ. ಅದನ್ನು ನಿರೂಪಿಸಿಕೊಳ್ಳಿ ಎಂದು ಶೋಭಾ ಕರಂದ್ಲಾಜೆ ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮರ್ಯಾದೆ ಇಲ್ಲದ ಬೇಜವಾಬ್ದಾರಿ ಮುಖ್ಯಮಂತ್ರಿ ಎಂದ ಶೋಭಾ, ಜಾರಿಗೆ ತರಲಾಗದ ಗ್ಯಾರೆಂಟಿ ಘೋಷಣೆ ಮಾಡುವಾಗ ನಿಮ್ಮ ತಲೆ ಸಗಣಿ ತುಂಬಿತ್ತಾ ಎಂದು ಪ್ರಶ್ನಿಸಿದರು.

Share Post