Districts

ಕಾರ್ಮಿಕನ ಸಾವು ಸುದ್ದಿ ಕೇಳಿ ಮಾಲೀಕನೂ ಹೃದಯಾಘಾತಕ್ಕೆ ಬಲಿ

ಶಿವಮೊಗ್ಗ: ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಸುದ್ದಿ ಕೇಳಿ ತೋಟದ ಮಾಲೀಕನೂ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ. ಆರಗ ಗ್ರಾಮದಲ್ಲಿ ಘಟನೆ ನಡೆದಿದ್ದು, ಕಾರ್ಮಿಕ ಬರ್ಮಪ್ಪ ಹಾಗೂ ತೋಟದ ಮಾಲೀಕ ದುಗ್ಗಪ್ಪ ಗೌಡ ಮೃತಪಟ್ಟವರು.

ನಿವೃತ್ತ ಶಿಕ್ಷಕರಾಗಿರುವ ತೋಟದ ಮಾಲೀಕ ದುಗ್ಗಪ್ಪ ಗೌಡ, ತೋಟದಲ್ಲಿ ಕೆಲಸ ಮಾಡಿಸುತ್ತಿದ್ದರು. ಈ ವೇಳೆ ಅಂದೆ ನಿನ್ನೆ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಾರ್ಮಿಕ ಬರ್ಮಪ್ಪ ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ. ಈ ವಿಷಯ ತಿಳಿದ ಮಾಲೀಕ ದುಗ್ಗಪ್ಪ ಗೌಡ ಆಘಾತಗೊಂಡಿದ್ದರು. ಕಾರ್ಮಿಕನ ಮನೆಯವರಿಗೆ ವಿಷಯ ಮುಟ್ಟಿಸಲು ದುಗ್ಗಪ್ಪ ಗೌಡ ಅವರೇ ಹೊರಟಿದ್ದರು. ಈ ವೇಳೆ ದಾರಿ ಮಧ್ಯೆಯೇ ಅವರೂ ಕುಸಿದುಬಿದ್ದಿದ್ದಾರೆ. ಅಲ್ಲಿಯೇ ಅವರೂ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.

Share Post