DistrictsPolitics

ನಾನು ಯಾರಿಗೂ ಪ್ರತಿಸ್ಪರ್ಧಿ ಅಲ್ಲ; ಬಿ.ಎಲ್‌.ಸಂತೋಷ್‌

ಮೈಸೂರು; ಈ ಚುನಾವಣೆಯಲ್ಲಿ ಅತ್ಯಂತ ಪ್ರಚಲಿತದಲ್ಲಿರುವ ಹೆಸರು ಬಿ.ಎಲ್.ಸಂತೋಷ್.‌ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್‌.ಸಂತೋಷ್‌ರಿಂದಾನೇ ನನಗೆ ಟಿಕೆಟ್‌ ಕೈತಪ್ಪಿದ್ದು ಎಂದು ಜಗದೀಶ್‌ ಶೆಟ್ಟರ್‌ ಆರೋಪ ಮಾಡಿದ್ದರು. ಇಷ್ಟೇ ಅಲ್ಲದೇ, ಬಿ.ಎಲ್‌.ಸಂತೋಷ್‌ ಹೇಳಿದವರಿಗೆ ಮಾತ್ರ ಟಿಕೆಟ್‌ ನೀಡಲಾಗಿದೆ. ಇದರಿಂದಾಗಿ ಹಲವು ಹಿರಿಯರಿಗೆ ಟಿಕೆಟ್‌ ಕೈತಪ್ಪಿದೆ ಎಂದು ಆರೋಪಿಸಲಾಗಿತ್ತು. ಇದಕ್ಕೆ ಬಿ.ಎಲ್‌.ಸಂತೋಷ್‌ ಮಾರ್ಮಿಕವಾಗಿ ಉತ್ತರ ಕೊಟ್ಟಿದ್ದಾರೆ. 

ಮೈಸೂರಿನಲ್ಲಿ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಸಭೆಯೊಂದರಲ್ಲಿ ಮಾತನಾಡಿರುವ ಅವರು, ನಮ್ಮ ಪಕ್ಷದಲ್ಲಿ ಅನೇಕ ನಾಯಕರಿದ್ದಾರೆ. ನಾನು ಯಾರಿಗೂ ಕೂಡಾ ಪ್ರತಿಸ್ಪರ್ಧಿ ಆಗೋದಕ್ಕೆ ಬಯಸೋದಿಲ್ಲ ಎಂದರು. ಮಾಧ್ಯಮದವರು ನೂರಾರು ಬಾರಿ ನನ್ನನ್ನು ಮಾತನಾಡಿಸಲು ಪ್ರಯತ್ನಿಸಿದರು. ಆದ್ರೆ ನಾನು ಯಾವ ಕಾರಣಕ್ಕೂ ಮಾತನಾಡಲಿಲ್ಲ.

ಬಿಜೆಪಿಯಲ್ಲಿ ಮಾತನಾಡುವವರು ಸಾಕಷ್ಟು ಇದ್ದಾರೆ. ಪ್ರತಾಪ ಸಿಂಗ್‌ ಥರದವರು ಮಾತಾನಾಡೋದಕ್ಕೆ ಇದ್ದಾರೆ. ಅವರು ಮಾತನಾಡಲಿ. ನಾನು ಮಾತಾಡಿ ಯಾರಿಗೆ ಯಾಕೆ ಪ್ರತಿಸ್ಪರ್ಧಿಯಾಗಲಿ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ.

Share Post