Districts

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾರಿ ಮಳೆ; ವಾಹನ ಓಡಾಟಕ್ಕೂ ಅಡಚಣೆ

ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ರಾತ್ರಿ ಭಾರಿ ಮಳೆಯಾಗಿದೆ. ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ತಾಲ್ಲೂಕುಗಳಲ್ಲಿ ವಿಪರೀತ ಮಳೆ ಸುರಿದಿದ್ದು, ಗುಡಿಬಂಡೆಯ ಬೈರಸಾಗರ ಕೆರೆ ಕೋಡಿ ಹರದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ.

ಭಾರಿ ಮಳೆಯಿಂದಾಗಿ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತಿದೆ. ಹಲವು ಮಾರ್ಗಗಳಲ್ಲಿ ವಾಹನ ಸಂಚಾರವೇ ಕಷ್ಟವಾಗಿದೆ. ಗುಡಿಬಂಡೆ-ಪೇರೇಸಂದ್ರ, ಹಂಪಸಂದ್ರ, ಲಕ್ಕೇನಹಳ್ಳಿ, ರಾಮಪಟ್ಟಣ ಮಾರ್ಗಗಳಲ್ಲಿ ಡಾಡಲು ಕಷ್ಟವಾಗುತ್ತಿದೆ. ಅಮಾನಿ ಭೈರಸಾಗರ ಕೆರೆ ಮಾರ್ಗದಲ್ಲಿ ರಸ್ತೆಯ್ಲಲೇ ನೀರು ನಿಂತಿರುವುದರಿಂದ ಓಡಾಟಕ್ಕೆ ತೊಂದರೆಯಾಗಿದೆ.

 

Share Post