CrimeDistricts

ಮುಮ್ತಾಜ್‌ ಅಲಿ ಮೃತದೇಹ ಪತ್ತೆ; ಕುಟುಂಬಸ್ಥರ ಆಕ್ರಂದನ!

ಮಂಗಳೂರು; ಮಂಗಳೂರಿನ ಮಾಜಿ ಶಾಸಕ ಮೊಯಿದ್ದಿನ್‌ ಬಾವಾ ಅವರ ಸಹೋದರ ಮೃತಪಟ್ಟಿದ್ದು, ಅವರ ಮೃತದೇಹ ಇಂದು ಪತ್ತೆಯಾಗಿದೆ.. ಸತತ 28 ಗಂಟೆಗಳಿಗೂ ಹೆಚ್ಚು ಕಾಲ ನಡೆಸಿದ ಕಾರ್ಯಾಚರಣೆ ನಂತರ ಮೃತದೇಹ ಸಿಕ್ಕಿದೆ.. ಮಂಗಳೂರಿನ ಕೂಳೂರು ಸೇತುವೆ ಬಳಿಯೇ ಮುಮ್ತಾಜ್‌ ಅವರ ಮೃತದೇಹ ಸಿಕ್ಕಿದೆ..
ನಿನ್ನೆ ಬೆಳಗ್ಗೆ ಯಾವುದೋ ವಿಚಾರವಾಗಿ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕಾರು ಹತ್ತಿ ಹೋಗಿದ್ದರು.. ನಂತರ ಕೂಳೂರು ಸೇತುವೆ ಬಳಿ ಅವರ ಕಾರು ಪತ್ತೆಯಾಗಿತ್ತು.. ನಿನ್ನೆಯಿಂದ ಮುಳುಗು ತಜ್ಞರು ಕಾರ್ಯಾಚರಣೆ ನಡೆಸುತ್ತಿದ್ದರು.. ಇಂದು ಮುಮ್ತಾಜ್‌ ಅಲಿ ಅವರ ಮೃತದೇಹ ಪತ್ತೆಯಾಗಿದೆ.. ಮೃತದೇಹ ಸಿಗುತ್ತಿದ್ದಂತೆ ಅವರಸ ಸಹೋದರ ಹಾಗೂ ಮಾಜಿ ಶಾಸಕ ಮೊಯಿದ್ದಿನ್‌ ಬಾವಾ ಕಣ್ಣೀರು ಹಾಕಿದ್ದಾರೆ..
ಪಲ್ಗುಣಿ ನದಿಗೆ ಹಾರಿ ಮುಮ್ತಾಜ್‌ ಅಲಿ ನಿನ್ನೆಯೇ ಆತ್ಮಹತ್ಯೆ ಮಾಡಿಕೊಂಡಿದ್ದರು.. ಮುಳುಗು ತಜ್ಞರು ಸ್ಕೂಬಾ ಡೈವ್‌ ಮೂಲಕ ಮೃತದೇಹದ ಹುಡುಕಾಟ ನಡೆಸಿದ್ದರು.. ನಿನ್ನೆ ಪೂರ್ತಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.. ಆದ್ರೆ ಇಂದು ಮುಮ್ತಾಜ್‌ ಅವರ ಮೃತದೇಹ ಪತ್ತೆಯಾಗಿದೆ.. ಮಹಿಳೆಯೊಬ್ಬರ ಬ್ಲ್ಯಾಕ್‌ ಮೇಲ್‌ನಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗುತ್ತಿದೆ.. ಆ ಮಹಿಳೆ ನಾಪತ್ತೆಯಾಗಿದ್ದಾರೆ.. ಈ ಸಂಬಂದ ಪೊಲೀಸರು ಆರು ಜನರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ..

Share Post