CrimeDistricts

ಪತ್ನಿಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ

ಚಾಮರಾಜನಗರ; ಪತ್ನಿಯನ್ನೇ ಕೊಲೆ ಮಾಡಿ ನಂತರ ಅದನ್ನ ವೀಡಿಯೋ ಮಾಡಿ ವಾಟ್ಸಪ್ ಸ್ಟೇಟಸ್‌ಗೆ ಹಾಕಿ ಬಳಿಕ ತಾನೂ ಆತಹತ್ಯೆಗೆ ಶರಣಾದ ಘಟನೆ, ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ನಡೆದಿದೆ.

ತಮಿಳುನಾಡಿನ ಧರ್ಮಪುರಿ ಜಿಲ್ಲೆ ಎರಭಯ್ಯನಹಳ್ಳಿಯ ಮುನಿರಾಜು ಎಂಬಾತ ಮದುವೆಯಾಗಿದ್ದ ಲಕ್ಷ್ಮಿ ಈತನ ಜೋತೆ ಸಂಸಾರ ಮಾಡಲಾಗದೆ ಪತಿಯನ್ನ ತೊರೆದು ಮಹದೇಶ್ವರ ಬೆಟ್ಟದ ನಾಗಮಲೆಯಲ್ಲಿ ಪರಪುರುಷನೊಂದಿಗೆ ವಾಸವಾಗಿದ್ದಳು. ಇದರಿಂದ ಬೇಸತ್ತ ಮುನಿರಾಜು ತಮಿಳುನಾಡಿನಿಂದ ನಾಗಮಲೆಗೆ ಬಂದು ಲಕ್ಷ್ಮಿಯನ್ನ ನಾಗಮಲೆಯ ಹೊರವಲೆಯಕ್ಕೆ ಕರೆಸಿ ಹತ್ಯೆಮಾಡಿದ್ದಾನೆ. ಪತ್ನಿ ಲಕ್ಷ್ಮಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಬಳಿಕ ಪತ್ನಿಯ ರಕ್ತಸಿಕ್ತ ದೇಹದ ವಿಡಿಯೋ ಮಾಡಿ ತನ್ನ ವಾಟ್ಸಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದಾನೆ, ನಂತರ ಮುನಿರಾಜು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದಾದನೆ. ಸದ್ಯ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಗಿದೆ.

Share Post