Districts

ಬೊಮ್ಮಾಯಿಯವರೇ ನಿಮಗೆ ಗಂಡಸ್ತನ ಇದ್ರೆ ಧರ್ಮಯುದ್ಧ ತಡೆಯಿರಿ: ಕುಮಾರಸ್ವಾಮಿ ಸವಾಲ್

ರಾಮನಗರ:  ಹಲಾಲ್‌ ದಂಗಲ್‌, ಹಾಗೂ ವ್ಯಾಪಾರ ಧರ್ಮಯುದ್ಧ ಬಗ್ಗೆ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರಿಗೆ ಬಹಿರಂಗ ಸವಾಲೆಸೆದಿದ್ದಾರೆ. ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರೇ ನಿಮಗೆ ಗಂಡಸ್ತನ ಅನ್ನೋದು ಇದ್ರೆ ರಾಜ್ಯದಲ್ಲಿ ನಡೆಯುತ್ತಿರುವ ಈ ಕೃತ್ಯಗಳನ್ನು ತಡೆಯಿರಿ. ಈ ಪದವನ್ನು ನಾನು ಬಳಸಬಾರದು ಆದ್ರೂ ಹೇಳುತ್ತಿದ್ದೇನೆ ಅಂದ್ರೆ ಎಷ್ಟು ನೋವಾಗಿರಬೇಕು ನನಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಕಡೆ ಕೇಸರಿ ಬಟ್ಟೆ ಹಾಕಿಕೊಂಡು ಸಮಾಜ ಒಡೆಯುವ ಕೆಲಸ ಆಗ್ತಿದೆ. ಸಮಾಜ ಗಾತುಕ ಶಕ್ತಿಗಳು ಸಮಾಜಕ್ಕೆ ಮಾರಕವಾದ ಕರಪತ್ರಗಳನ್ನು ಎಲ್ಲೆಡೆ ಹಂಚುತ್ತಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಗೊತ್ತಿದ್ರೂ ಮೌನವಾಗಿದ್ದಾರೆ. ಇದ್ಯಾವ ಸೀಮೆ ಸರ್ಕಾರ..? ರಾಜ್ಯದಲ್ಲಿ ಶಾಂತಿ ಕದಡುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಇದೆಲ್ಲಾ ಗೊತ್ತಿದ್ರೂ ಈ ಸರ್ಕಾರ ಮೌನವಾಗಿರುವುದೇಕೆ..? ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತು ನೀವವೇನು ಮಾಡ್ತಿದ್ದೀರಿ ಬೊಮ್ಮಯಿಯವರೇ..?

ಈ ನಾಡು ಶಾಂತಿಯಿಂದ ಇರಬೇಕು. ನಮ್ಮ ಜನರ ಬದುಕನ್ನು ಹಾಳು ಮಾಡುವ ಕೆಲಸ ನಡೆಯುತ್ತಿದ್ದರೆ ಇದನ್ನು ನೋಡಿ ನಾನು ಮೌನವಾಗಿರುವುದಿಲ್ಲ. ನನಗೆ ವೋಟ್‌ ಮುಖ್ಯ ಅಲ್ಲ..ಜನರ ಬದುಕು ಮುಖ್ಯ. ಕಾಂಗ್ರೆಸ್‌ನವರಿಗೆ ಮಾನ ಮಾರ್ಯಾದೆ ಇಲ್ಲ. ಏನ್‌ ಮಾಡಲು ಹೊರಟಿದ್ದೀರಿ ರಾಜ್ಯದಲ್ಲಿ ಇಷ್ಟೊಂದು ನಡೆಯುತ್ತಿದೆ.  ಸರ್ಕಾರಕ್ಕಾಗಲೀ..ಸಿಎಂಗಾಗಲೀ ಯಾವುದೇ ರೀತಿಯ ಆತಂಕ ಇಲ್ಲ  ಎಂದು ಕಿಡಿ ಕಾರಿದ್ದಾರೆ.

Share Post