Districts

ಸುಳ್ಳು ಸಂದೇಶ ರವಾನೆ ಮಾಡುವುದು ತಪ್ಪು: ಮಂಜೇಗೌಡ ವಿರುದ್ದ ಜಿಟಿಡಿ ಟೀಕೆ

ಮೈಸೂರು: ಹರೀಶ್ ಗೌಡ ಬೇಲ್ ಮೇಲೆ ಇದ್ದಾರೆ ಎಂಬ ಎಂಎಲ್‌ಸಿ ಮಂಜೇಗೌಡ ಹೇಳಿಕೆ ವಿರುದ್ಧ ಶಾಸಕ ಜಿ.ಟಿ.ದೇವೇಗೌಡ  ಕಿಡಿ ಕಾರಿದ್ದಾರೆ. ಹರೀಶ್ ಗೌಡ ಬೇಲ್ ಮೇಲೆ ಇದ್ದಾರಾ, ಕೋರ್ಟ್ ನಲ್ಲಿ ಬೇಲ್ ಮೇಲೆ ಇರುವವರು ಯಾರು ಎಂದು ಎಂಎಲ್‌ಸಿ ಸಿ‌.ಎನ್.ಮಂಜೇಗೌಡರಿಗೆ ಶಾಸಕ ಜಿ.ಟಿ.ದೇವೇಗೌಡ ಪ್ರಶ್ನಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ನಾನು 50 ವರ್ಷಕ್ಕೂ ಹೆಚ್ಚು ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡು ಬಂದಿದ್ದೀನಿ. ನಾನು ಈ ರೀತಿ ಹಗುರವಾಗಿ ಮಾತನಾಡಲು ಆಗುವುದಿಲ್ಲ. ಜನರಿಗೆ ಗೊತ್ತಿದೆ ಯಾರು ಬೇಲ್ ಮೇಲೆ ಆಚೆ ಇದ್ದಾರೆ ಅಂತ. ನನ್ನ ಮೇಲೆ ಎಷ್ಟೇ ಮಾತನಾಡಿದರು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕೋಪವೂ ಮಾಡಿಕೊಳ್ಳುವುದಿಲ್ಲ ಎಂದ್ರು.

ಹರೀಶ್ ಗೌಡ ಮೇಲೆ ಈ ರೀತಿ ಹೇಳಿಕೆ ನೀಡಿದ್ರೆ ಜನರಿಗೆ ಯಾವ ರೀತಿಯ ಸಂದೇಶ ಹೋಗಬಹುದು. ಹರೀಶ್ ಗೌಡ ಮೇಲೆ ಯಾವ ಕೇಸ್ ಇದೆ. ಯಾವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂದು ಆಧಾರ ಸಹಿತ ತೋರಿಸಿ ಎಂದು ಗುಡುಗಿದ್ದಾರೆ.

ಯಾವ ಕೋರ್ಟ್​ನಲ್ಲಿ ಬೇಲ್ ಪಡೆದುಕೊಂಡಿದ್ದಾರೆ ನನಗಂತೂ ಗೊತ್ತಿಲ್ಲ. ಇದಕ್ಕೆಲ್ಲ ನಾನು ಉತ್ತರ ಕೊಡುವ ಅಗತ್ಯ ಇಲ್ಲ. ನಮ್ಮ ಕುಟುಂಬದ ಬಗ್ಗೆ 100 ಸಾರಿ ತಮಟೆ ಬಡಿದುಕೊಂಡು ಸಾರಿದರೂ ಜನರು ನಂಬುವುದಿಲ್ಲ ಎಂದು ಮಂಜೇಗೌಡ ವಿರುದ್ಧ ಜಿಟಿಡಿ ವಾಗ್ದಾಳಿ ನಡೆಸಿದರು.

Share Post