CrimeDistricts

ರೈಲ್ವೆ ಕಾಮಗಾರಿಗಾಗಿ ತೆಗೆದಿದ್ದ ಗುಂಡಿಗೆ ಬಿದ್ದು ಬಾಲಕಿ ಬಲಿ!

ಶಿವಮೊಗ್ಗ; ರೈಲ್ವೆ ಕಾಮಗಾರಿಗಾಗಿ ಗುಂಡಿ ತೆಗೆದಿದ್ದು, ನೋಡದೇ ಅದರೊಳಗೆ ಬಿದ್ದು ಐದನೇ ತರಗತಿಯ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ. ಶಿವಮೊಗ್ಗದ ಕೋಟೆಗಂಗೂರಿನಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಬಾಲಕಿಯನ್ನು ಚೈತ್ರಾ ಎಂದು ಗುರುತಿಸಲಾಗಿದೆ. 

ರೈಲ್ವೇ ಟರ್ಮಿನಲ್‌ ನಿರ್ಮಾಣಕ್ಕಾಗಿ ರೈಲ್ವೆ ಇಲಾಖೆ ರಸ್ತೆ ಮಧ್ಯೆ ಗುಂಡಿ ತೋಡಿತ್ತು. ಬಾಲಕಿ ನಿನ್ನೆ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದಿದ್ದಳು. ಆದ್ರೆ ಪೋಷಕರು ಮನೆಯ ಬೀಗ ಹಾಕಿಕೊಂಡು ಹೊದಲ ಬಳಿ ಹೋಗಿದ್ದರು. ಹೀಗಾಗಿ ಬಾಲಕಿ ಚೈತ್ರಾ ಹೊಲದ ಬಳಿ ಹೋಗಿ ಮನೆಯ ಕೀ ಪಡೆದುಕೊಂಡು ಬರುತ್ತಿದ್ದಳು, ಈ ವೇಳೆ ನೋಡದೇ ಆ ಗುಂಡಿಗೆ ಬಿದ್ದಿದ್ದಾಳೆ.

ಮಳೆ ಬಂದಿದ್ದರಿಂದ ಗುಂಡಿಯಲ್ಲಿ ನೀರು ತುಂಬಿತ್ತು. ಹೀಗಾಗಿ ಬಾಲಕಿ ಮೇಲೆ ಬರಲು ಆಗಿಲ್ಲ. ಯಾರೂ ನೋಡದೇ ಕಾರಣ ಬಾಲಕಿ ಅಲ್ಲೇ ಮೃತಪಟ್ಟಿದ್ದಾಳೆ. ಇತ್ತ ಹೊಲದ ಕೆಲಸ ಮುಗಿಸಿಕೊಂಡು ಬಂದ ಪೋಷಕರು ಮನೆಯ ಬಳಿ ನೋಡಿದಾಗ ಚೈತ್ರಾ ಇರಲಿಲ್ಲ. ಮನೆಯ ಬಾಗಿಲು ಕೂಡಾ ತೆರೆದಿರಲಿಲ್ಲ. ಹೀಗಾಗಿ ಆತಂಕಗೊಂಡು ಹುಡುಕಾಟ ನಡೆಸಿದಾಗ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವುದು ಪತ್ತೆಯಾಗಿದೆ.

 

Share Post