CrimeDistricts

ರಥೋತ್ಸವದ ವೇಳೆ ಪಲ್ಟಿ ಹೊಡೆದ ರಥ; ಭಕ್ತರು ಸೇಫ್‌

ಚಾಮರಾಜನಗರ; ರಥೋತ್ಸವ ನಡೆಯುತ್ತಿದ್ದ ವೇಳೆ ರಥ ಉರುಳಿಬಿದ್ದಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಅಮಚವಾಡಿ-ಚೆನ್ನಪ್ಪನಪುರ ಗ್ರಾಮದ ವೀರಭದ್ರೇಶ್ವರ ಸ್ವಾಮಿ ದೇಗುಲದಲ್ಲಿ ನಡೆದಿದೆ. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಅದೃಷ್ಟವಶಾತ್‌ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.

ಇಲ್ಲಿ ವೀರಭದ್ರೇಶ್ವರ ದೇಗುಲ ಆರು ಶತಮಾನಗಳಿಗೂ ಹಳೆಯದು, ಎರಡು ವರ್ಷಗಳ ಬಳಿಕ ಇಲ್ಲಿ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ಮೊದಲಿಗೆ ದೇಗುಲದ ಸುತ್ತ ರಥವನ್ನು ಒಂದು ರೌಂಡ್‌ ಎಳೆಯಬೇಕಿತ್ತು. ಆದ್ರೆ ಅರ್ಧ ತಲುಪುವ ವೇಳೆಗೆ ಚಕ್ರ ಕಲ್ಲುನ ಮೇಲೆ ಹತ್ತಿ ರಥ ಉರುಳಿಬಿದ್ದಿದೆ. ಈ ವೇಳೆ ನೂರಾರು ಭಕ್ತರು ಅಲ್ಲಿ ಸೇರಿದ್ದರು. ಆದ್ರೆ ಎಲ್ಲರೂ ಎಚ್ಚೆತ್ತುಕೊಂಡು ದೂರ ಓಡಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

Share Post