CrimeDistricts

ಚಿಕ್ಕಮಗಳೂರಲ್ಲಿ ಪ್ರೇಮ ವೈಫಲ್ಯಕ್ಕೆ ಬೇಸತ್ತು ಬಾಲಕಿ ಆತ್ಮಹತ್ಯೆ

ಚಿಕ್ಕಮಗಳೂರು; ಯುವಕನೊಬ್ಬ ಪ್ರೀತಿಸಿ ಮೋಸ ಮಾಡಿದ್ದಕ್ಕೆ ಮನನೊಂದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲ್ಲೂಕಿನ ಸಂಸೆ ಬಳಿಯ ಜೋಗಿ ಕುಂಬ್ರಿ ಗ್ರಾಮದಲ್ಲಿ ನಡೆದಿದೆ. ಹದಿನೇಳು ವರ್ಷದ ದೀಪ್ತಿ ಎಂಬಾಕೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಬಾಲಕಿ.

ಎಸ್‌.ಕೆ.ಮೇಗಲ್‌ ಗ್ರಾಮದ ನಿತೇಶ್‌ ಎಂಬಾತನನ್ನು ದೀಪ್ತಿ ಪ್ರೀತಿಸುತ್ತಿದ್ದಳಂತೆ. ಆದ್ರೆ ಆತ ಪ್ರೀತಿಸಿ ಮೋಸ ಮಾಡಿದ್ದಾನೆ. ಪ್ರಥಮ ಪಿಯುಸಿ ಓದುತ್ತಿದ್ದ ದೀಪ್ತಿ ಇದರಿಂದ ತೀವ್ರವಾಗಿ ನೊಂದಿದ್ದಾಳೆ. ಜನವರಿ ಹತ್ತರಂದು ಕಾಲೇಜಿಗೆ ಹೋಗಿದ್ದ ಆಕೆ, ನೇರವಾಗಿ ಮನೆಗೆ ಬಂದು ಮನೆಯಲ್ಲಿದ್ದ ಕಳೆನಾಶಕ ಸೇವಿಸಿದ್ದಾಳೆ. ಕೂಡಲೇ ಪೋಷಕರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ದೀಪ್ತಿ ಸಾವನ್ನಪ್ಪಿದ್ದಾಳೆ.

Share Post