CrimeDistricts

ಗಾಣಗಾಪುರ ದತ್ತ ಭಕ್ತನ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಹತ್ಯೆ!

ಕಲಬುರಗಿ; ದೇವಲ ಗಾಣಗಾಪುರ ದತ್ತನ ದರ್ಶನಕ್ಕೆ ಬಂದಿದ್ದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ..  ಮಹಾರಾಷ್ಟ್ರದ ಪುಣೆ ಮೂಲದ 28 ವರ್ಷದ ಮಹೇಶ್‌ ಕೊಲಾಟೆ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ..

ಮಹೇಶ್‌ ಅವರು ದತ್ತನ ಭಕ್ತನಾಗಿದ್ದು, ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರಕ್ಕೆ ಬಂದಿದ್ದ.. ದೇವರ ದರ್ಶನ ಪಡೆದ ಮೇಲೆ ಆತನ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.. ಗಾಣಗಾಪುರದ ಸಂಗಮದ ಬಳಿ ಜಮೀನಿನಲ್ಲಿ ಮಹೇಶ್‌ ಮೃತದೇಹ ಪತ್ತೆಯಾಗಿದೆ..

ಮಹೇಶ್‌ ಕೊಲಾಟೆ ಎರಡು ತಿಂಗಳಿಂದ ಮನೆಗೆ ಹೋಗಿರಲಿಲ್ಲ.. ಮನೆಯವರಿಗೂ ಮಾಹಿತಿ ನೀಡದೇ ಮಹೇಶ್‌ ಟೆಂಪಲ್‌ ರನ್‌ ಮಾಡುತ್ತಿದ್ದ ಎಂದು ತಿಳಿದುಬಂದಿದೆ.. ಮೊನ್ನೆ ಈತ ಗಾಣಗಾಪುರಕ್ಕೆ ಬರುವುದಾಗಿ ಕೆಲವರಿಗೆ ಹೇಳಿದ್ದನಂತೆ.. ಈ ಬಗ್ಗೆ ಮಾಹಿತಿ ಇದ್ದವರೇ ಬಂದು ಈ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ..

ಈ ಬಗ್ಗೆ ದೇವಲಗಾಣಗಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ..

 

Share Post