CrimeDistricts

ಬಾಲಕಿಯನ್ನು ಚುಡಾಯಿಸಿದ ಪುಂಡರು; ಪ್ರಶ್ನಿಸಿದ್ದಕ್ಕೆ ನಾಲ್ವರಿಗೆ ಚಾಕು ಇರಿತ

ಬೆಳಗಾವಿ; ಅಪ್ತಾಪ್ರ ಬಾಲಕಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನಾಲ್ವರಿಗೆ ಚಾಕುವಿನಿಂದ ಇರಿದಿರುವ ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲದ ಆಶ್ರಯ ಕಾಲೋನಿಯಲ್ಲಿ ನಡೆದಿದೆ. ಬಾಲಕಿಯೊಬ್ಬಳನ್ನು ಪುಂಡರು ಚುಡಾಯಿಸಿದ್ದು, ಅದನ್ನು ಪ್ರಶ್ನಿಸಲು ಹಿರಿಯರು ಹಾಗೂ ಬಾಲಕಿಯ ತಂದೆ ಹೋಗಿದ್ದರು. ಈ ವೇಳೆ ಬಾಲಕ ಹಾಗೂ ಆತನ ಸ್ನೇಹಿತರು ಬುದ್ಧಿ ಹೇಳಲು ಬಂದವರ ಮೇಲೆ ಚಾಕುವಿನಿಂದ ದಾಳಿ ಮಾಡಿ ಗಾಯಗೊಳಿಸಿದ್ದಾರೆ.

ಚುಡಾಯಿಸಿದ ಚಾಲಕ ಹಾಗೂ ಬಾಲಕಿ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಬಾಲಕ ಆಗಾಗ ಬಾಲಕಿಯನ್ನು ಚುಡಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಇದನ್ನು ಪ್ರಶ್ನಿಸಲು ಹೋಗಿದ್ದಕ್ಕೆ ದಾಳಿ ನಡೆದಿದೆ. ರಫೀಕ್ ಕುರಿಕೊಪ್ಪ, ಸಾಹಿದ್ ಸೌದಾಗರ್, ಅತಾಹುಲ್ಲಾ ಹುಬ್ಬಳ್ಳಿ, ಮೆಹಬೂಬ್ ಹುಬ್ಬಳ್ಳಿ ಎಂಬುವವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಜಗಳ ಬಿಡಿಸಲು ಹೋಗಿದ್ದ ರವಿ ತಿಮ್ಮನ್ನರ್ ಎಂಬುವವರ ಮೇಲೂ ಹಲ್ಲೆಯಾಗಿದೆ ಎಂದು ತಿಳಿದುಬಂದಿದೆ.

Share Post