CrimeNational

ವಂದೇ ಭಾರತ್‌ ರೈಲಿಗೆ ಮಹಿಳೆ ಬಲಿ

ಗಾಂಧೀನಗರ; ಉತ್ತರ ಭಾರತದಲ್ಲಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳನ್ನು ಬಿಟ್ಟಾಗಿನಿಂದ ಒಂದಿಲ್ಲೊಂದು ದುರ್ಘಟನೆಗಳು ನಡೆಯುತ್ತಲೇ ಇವೆ. ಕೆಲ ದಿನಗಳ ಅಂತರದಲ್ಲಿ ಎರಡು ಬಾರಿ ಹಸುಗಳು ರೈಲಿಗೆ ಅಡ್ಡಬಂದಿದ್ದವು. ಇದ್ರಿಂದಾಗಿ ವಂದೇ ಭಾರತ್‌ ರೈಲಿನ ಮುಂಭಾಗ ಜಖಂಗೊಂಡಿತ್ತು. ಇದೀಗ ಇದೇ ರೈಲಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಗುಜರಾತ್‍ನ ಆನಂದ್ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹರಿದು 54 ವರ್ಷದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಎಂಬ ಮಹಿಳೆಯೇ ರೈಲಿಗೆ ಸಿಲುಕಿ ಸಾವನ್ನಪ್ಪಿದವರು. ಆನಂದ್ ರೈಲ್ವೆ ನಿಲ್ದಾಣದ ಬಳಿ ಮಹಿಳೆ ಹಳಿ ದಾಟುತ್ತಿದ್ದರು. ಈ ವೇಳೆ ಹೈಸ್ಪೀಡ್‌ ರೈಲು ಡಿಕ್ಕಿ ಹೊಡೆದಿದೆ. ಅಹಮದಾಬಾದ್‍ನ ನಿವಾಸಿಯಾಗಿರುವ ಬೀಟ್ರಿಸ್ ಆರ್ಚಿಬಾಲ್ಡ್ ಪೀಟರ್ ಅವರು, ಆನಂದ್‍ನ ಸಂಬಂಧಿಕರ ಮನೆಗೆ ತೆರಳುತ್ತಿದ್ದ ವೇಳೆ ಈ ದುರಂತ ನಡೆದಿದೆ.

Share Post