Districts

ಸಿನಿಮಾ ಶೈಲಿಯಲ್ಲಿ ಮದುವೆ; ಹುಡುಗಿಯನ್ನು ಕರೆತಂದಿದ್ದೇ ರೋಚಕ..!

ಚಿಕ್ಕಮಗಳೂರು: ಪ್ರೀತಿ ಮಾಡಬಾರದು, ಮಾಡಿದರೆ ಜಗಕ್ಕೆ ಹೆದರಬಾರದು ಎಂಬ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಲವ್ ಫಿಲಾಸಫಿಯನ್ನು ಇವರು ಅಕ್ಷರಶಃ ಫಾಲೋ ಮಾಡಿದ್ದಾರೆ. ಪ್ರೇಮಿಗಳಾಗಿದ್ದ ಇವರು ಈಗ ಸತಿ-ಪತಿಗಳಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಬ್ಳಿ ಗ್ರಾಮದ ಯೋಗಾನಂದ್ ಹಾಗೂ ಜಿ.ಕೊಪ್ಪಲು ಗ್ರಾಮದ ಚಂದನಾ ಪ್ರೀತಿ ಮಾಡುತ್ತಿದ್ದರು. ಕಡೂರು ಗೌರ್ನಮೆಂಟ್ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಇವರಿಬ್ಬರ ಪರಿಚಯವಾಯಿತು. ಪರಿಚಯ ಪ್ರೀತಿಗೆ ತಿರುಗಿತು.

ಸದ್ಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಯೋಗಾನಂದ್ ಹಾಗೂ ಚಂದನಾ ಪ್ರೀತಿ ಮಾಡುತ್ತಿರುವ ವಿಚಾರ ಯುವತಿ ಪೋಷಕರಿಗೆ ತಿಳಿಯಿತು. ಯಾವುದೇ ಕಾರಣಕ್ಕೂ ಅವಳು ಲವ್ ಮ್ಯಾರೇಜ್ ಆಗಬಾರದು, ನಾವು ತೋರಿಸಿದ ಹುಡುಗನನ್ನೆ ಮದುವೆ ಮಾಡಬೇಕೆಂದು ತೀರ್ಮಾನ ಮಾಡಿದರು. ಚಂದನಾಳನ್ನು ರಹಸ್ಯ ಸ್ಥಳದಲ್ಲಿ ಇರಿಸಿದ್ದರು.

ಈ ವಿಚಾರ ತಿಳಿದ ಯೋಗಾನಂದ ಪ್ರಿಯತಮೆಯನ್ನು ಅಲ್ಲಿಂದ ಬಂಧ ಮುಕ್ತಗೊಳಿಸಿದನು. ಅಷ್ಟೆ ಅಲ್ಲದೆ ದೇವಸ್ಥಾನದಲ್ಲಿ ಮದುವೆ ಕೂಡ ಆಗಿದ್ದಾನೆ. ಯುವತಿ ಪೋಷಕರಿಂದ ನಮಗೆ ರಕ್ಷಣೆ ನೀಡುವಂತೆ ಇಬ್ಬರು ಸಖರಾಯಪಟ್ಟಣ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲು ಮಾಡಿದ್ದಾರೆ. ನಮಗೇನಾದರೂ ತೊಂದರೆ ಆದರೆ ನಮ್ಮ ಮಾವಂದಿರೆ ಕಾರಣ ಎಂದು ಚಂದನಾ ದೂರಿನಲ್ಲಿ ತಿಳಿಸಿದ್ದಾಳೆ.

Share Post