CrimeDistricts

ಸರ್ಕಾರಿ ಬಸ್‌ ಹಾಗೂ ಜೀಪ್‌ ನಡುವೆ ಭೀಕರ ಅಪಘಾತ; ನಾಲ್ವರ ದುರ್ಮರಣ!

ಮೈಸೂರು; ಹುಣಸೂರು ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸರ್ಕಾರಿ ಬಸ್‌ ಹಾಗೂ ಜೀಪ್‌ ನಡುವೆ ಡಿಕ್ಕಿ ಸಂಭವಿಸಿದ್ದು, ಜೀಪ್‌ ಚಾಲಕ ಸೇರಿ ನಾಲ್ಕು ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಹುಣಸೂರಿನ ಅಯ್ಯಪ್ಪಸ್ವಾಮಿ ಬೆಟ್ಟದ ಬಳಿ ಈ ದುರಂತ ನಡೆದಿದೆ. ಬಸ್‌ ಡಿಕ್ಕಿಯಾದ ರಭಸಕ್ಕೆ ಜೀಪ್‌ ಸಂಪೂರ್ಣ ನಜ್ಜುಗುಜ್ಜಾಗಿದೆ. 

ಜೀಪ್‌ ಹೆಚ್‌ಡಿ ಕೋಟೆಯಿಂದ ಹುಣಸೂರಿಗೆ ಆಗಮಿಸುತ್ತಿತ್ತು. ಅದರಲ್ಲಿದ್ದವರು ಎಲ್ಲಾ ಕೂಲಿ ಕಾರ್ಮಿಕರು ಎಂದು ತಿಳಿದುಬಂದಿದೆ. ಹುಣಸೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Share Post