DistrictsPolitics

ಹಾಸನದಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿದರೂ ಓಕೆ; ರೇವಣ್ಣ

ಹಾಸನ; ಹಾಸನ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಗೊಂದಲವಿಲ್ಲ. ದೇವೇಗೌಡರು ಸಾಮಾನ್ಯ ಕಾರ್ಯಕರ್ತನಿಗೇ ಟಿಕೆಟ್‌ ಅಂದ್ರೆ ಅದಕ್ಕೆ ನಾನು ಸಹಮತ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಹೇಳಿದ್ದಾರೆ. ಹೊಳೇನರಸೀಪುರದಲ್ಲಿ ಮಾತನಾಡಿದ ಅವರು, ನಾನು ದೇವೇಗೌಡರ ಜೊತೆ ಎಲ್ಲವನ್ನೂ ಮಾತನಾಡಿದ್ದೇನೆ. ನಾವು ಏನು ಮಾತನಾಡಿದ್ದೇವೆ ಎಂದು ಎಂಬುದು ನಮ್ಮಿಬ್ಬರಿಗಷ್ಟೇ ಗೊತ್ತಿರೋದು. ದೇವೇಗೌಡರೇ ನಮ್ಮ ಸುಪ್ರೀಂ, ಅವರು ಹೇಳಿದಂತೆಯೇ ನಾನು ಕೇಳುತ್ತೇನೆ ಎಂದು ಹೇಳಿದ್ದಾರೆ.

ಕುಮಾರಣ್ಣ ಹಾಗೂ ನಾನು ಮೊದಲೇ ಮಾತಾಡಿಕೊಂಡಿದ್ದೇವೆ. ನಮ್ಮಿಬ್ಬರನ್ನೂ ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಶಕುನಿಗಳ ಮಾತಿಗೆ ನಾನು ತಲೆ ಕೂಡಾ ಕೆಡಿಸಿಕೊಳ್ಳುವುದಿಲ್ಲ. ನಾವು ಹೊಡೆದಾಡಿದರೂ ಬೆಳಗಾಗೋದರೊಳಗೆ ಒಂದಾಗಿಬಿಡ್ತೀವಿ ಎಂದು ರೇವಣ್ಣ ಹೇಳಿದ್ದಾರೆ.

Share Post