CrimeDistricts

ಶಿರಾಳಕೊಪ್ಪದಲ್ಲಿ ಕಂಪಿಸಿದ ಭೂಮಿ; ಮನೆಯಿಂದ ಓಡಿ ಬಂದ ಜನ

ಶಿವಮೊಗ್ಗ; ಇಂದು ನಸುಕಿನ ಜಾವ ಶಿರಾಳಕೊಪ್ಪದಲ್ಲಿ ಭೂಮಿ‌ ಕಂಪಿಸಿದ ಅನುಭವವಾಗಿದೆ. ಬೆಳಗಿನ ಜಾವ 3.40 ಹಾಗೂ 3.45 ರ ಸುಮಾರಿಗೆ ಭೂಮಿ ಕಂಪಿಸಿದ್ದು, ನಿದ್ರೆಯಲ್ಲಿದ್ದ ಜನ ಮನೆಯಿಂದ ಹೊರಕ್ಕೆ ಓಡಿಬಂದಿದ್ದಾರೆ. ಪಾತ್ರೆಗಳು ನಡುಗಿದ ಅನುಭವವಾಗಿದೆ.

    ಭೂಮಿ ಕೇವಲ 3-4 ಸೆಕೆಂಡ್ ಕಂಪಿಸಿದೆ. ಆದರೆ, ಯಾವುದೇ ವಸ್ತುಗಳು ಬಿದ್ದಿಲ್ಲ,‌ ಮನೆಗಳ ಗೋಡೆ ಬಿರುಕು ಬಿಟ್ಟಿಲ್ಲ. ಕಂಪನದ ಅನುಭವ ಶಿರಾಳಕೊಪ್ಪ ಪಟ್ಟಣದ ವ್ಯಾಪ್ತಿಯಲ್ಲಿ ಮಾತ್ರ ನಡೆದಿದೆ. ಪಕ್ಕದ ಗ್ರಾಮಗಳಲ್ಲಿ ಯಾವುದೇ ಕಂಪನದ ಅನುಭವವಾಗಿಲ್ಲ. ಈ ಕುರಿತು ಮಾತನಾಡಿರುವ  ಶಿಕಾರಿಪುರ ತಹಸೀಲ್ದಾರ್ ಕವಿರಾಜ್ ಅವರು, ನಸುಕಿನ ಜಾವ ಎರಡು ಬಾರಿ ಭೂಮಿ ಕಂಪಿಸಿದೆ ಎಂದು ಶಿರಾಳಕೊಪ್ಪ ಪಟ್ಟಣದವರು ತಿಳಿಸಿದ್ದಾರೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದಿದ್ದಾರೆ.

Share Post