DistrictsPolitics

ಡಿಕೆಶಿ ನಾಮಪತ್ರ ತಿರಸ್ಕಾರವಾಗುವ ಭೀತಿ ;ಕನಕಪುರದಲ್ಲಿ ಸಂಸದ ಡಿ.ಕೆ.ಸುರೇಶ್‌ ನಾಮಪತ್ರ

ರಾಮನಗರ; ಡಿ.ಕೆ.ಶಿವಕುಮಾರ್‌ ನಾಮಪತ್ರ ತಿರಸ್ಕಾರವಾಗುವ ಭೀತಿ ಹಿನ್ನೆಲೆಯಲ್ಲಿ ಅವರ ಸಹೋದರ ಸಂಸದ ಡಿ.ಕೆ.ಸುರೇಶ್‌ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಡಿ.ಕೆ.ಸುರೇಶ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.  ಡಿ.ಕೆ.ಶಿವಕುಮಾರ್‌ ವಿರುದ್ಧ ಐಟಿ, ಇಡಿ ಕೇಸ್‌ಗಳಿವೆ. ಇದೇ ವಿಚಾರದ ಸಂಬಂಧ ನಾಮಪತ್ರ ತಿರಸ್ಕೃತಗೊಂಡರೆ ಎಂಬ ಅನುಮಾನದಿಂದಾಗಿ ಡಿ.ಕೆ.ಸುರೇಶ್‌ರಿಂದ ನಾಮಪತ್ರ ಹಾಕಿಸಲಾಗಿದೆ.

ಏಪ್ರಿಲ್‌ 17ರಂದು ಡಿ.ಕೆ.ಶಿವಕುಮಾರ್‌ ಬೃಹತ್‌ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಆದ್ರೆ ತಿರಸ್ಕೃತವಾಗುವ ಭೀತಿಯಿಂದಾಗಿ ಮುಂಜಾಗ್ರತಾ ಕ್ರಮವಾಗಿ ಡಿ.ಕೆ.ಸುರೇಶ್‌ರಿಂದ ನಾಮಪತ್ರ ಹಾಕಿಸಲಾಗಿದೆ.

 

Share Post