CrimeDistricts

ಬಂಡಿಪುರ ಅರಣ್ಯದಲ್ಲಿ ಮನುಷ್ಯನ ಅರ್ಧ ದೇಹ ಪತ್ತೆ; ಹುಲಿ ತಿಂದುಬಿಡ್ತಾ..?

ಚಾಮರಾಜನಗರ; ಚಾಮರಾಜನಗರ ಹಾಗೂ ಮೈಸೂರು ಸುತ್ತಮುತ್ತ ಇತ್ತೀಚೆಗೆ ವನ್ಯಮೃಗಗಳ ಹಾವಳಿ ಹೆಚ್ಚಾಗುತ್ತಿದೆ. ಮನುಷ್ಯರು ಅವುಗಳ ದಾಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಪುಷ್ಠಿ ಎಂಬಂತೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬನ ಅರ್ಧ ದೇಹ ಪತ್ತೆಯಾಗಿದೆ. ಹುಲಿಯೇ ಈ ವ್ಯಕ್ತಿಯನ್ನು ತಿಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಐವತ್ಕಾಲ್ಕು ವರ್ಷದ ಬಸವ ಎಂಬುವವರೇ ಸಾವನ್ನಪ್ಪಿದವರು. ಇವರು ಚಾಮರಾಜನಗರ ಜಿಲ್ಲೆಯ ಆಡಿನಕಣಿವೆ ಹಾಡಿಯ ಬಳಿ ಬಿಟಿಆರ್ ವ್ಯಾಪ್ತಿಯಲ್ಲಿ ಸೌದೆ ತರಲು ಹೋಗಿದ್ದರು. ಆದ್ರೆ ಮನೆಗೆ ವಾಪಸ್ಸಾಗಿರಲಿಲ್ಲ. ಹುಡುಕಾಟ ನಡೆಸಿದಾಗಿ ಕಾಡಿನಲ್ಲಿ ಅರ್ಧ ದೇಹ ಪತ್ತೆಯಾಗಿದೆ. ಹುಲಿ ದಾಳಿಯಿಂದಲೇ ಸಾವನ್ನಪ್ಪಿರುವ ಸಾದ್ಯತೆ ಇದೆ ಎಂದು ತಿಳಿದುಬಂದಿದೆ.

ಬಸವ ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಸರ್ಕಾರದಿಂದ ಈ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.

 

Share Post