DistrictsPolitics

DK Shivakumar; ಡಿ.ಕೆ.ಶಿವಕುಮಾರ್‌ ಯಾವತ್ತೂ ಮೋಸ ಮಾಡಿಲ್ಲ; ಡಿ.ಕೆ.ಶಿವಕುಮಾರ್‌

ಕನಕಪುರ; ಕನಕಪುರದಲ್ಲಿ ನಾಮಪತ್ರ ಸಲ್ಲಿಸಿ ರಾಜ್ಯದಲ್ಲಿ ಪ್ರಚಾರಕ್ಕೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇದೇ ಮೊದಲ ಬಾರಿಗೆ ಕನಕಪುರದಲ್ಲಿ ಪ್ರಚಾರ ಮಾಡಿದ್ದಾರೆ. ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾದ ಇಂದು ಡಿ.ಕೆ.ಶಿವಕುಮಾರ್‌, ಕನಕಪುರದಲ್ಲಿ ಬೃಹತ್‌ ಬಹಿರಂಗ ಸಭೆ ನಡೆಸಿದರು. ಈ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರಕ್ಕೆ ನಿಮ್ಮ ಹಳ್ಳಿಗೆ ಬರೋದಕ್ಕೆ ಆಗಲಿಲ್ಲ. ನೀವು ನನ್ನನ್ನು ಬೆಂಬಲಿಸುತ್ತಾ ಬಂದಿದ್ದೀರಿ ಧನ್ಯವಾದಗಳು ಎಂದಿದ್ದಾರೆ.

ಅಭ್ಯರ್ಥಿ ನಾನಲ್ಲ, ಕನಕಪುರದ ಜನತೆಯೇ ಅಭ್ಯರ್ಥಿಗಳು ಎಂದ ಡಿ.ಕೆ.ಶಿವಕುಮಾರ್‌, ರಾಜ್ಯದಲ್ಲಿ ನನ್ನನ್ನು ಗುರುತಿಸುವಂತೆ ಮಾಡಿದ್ದು ನೀವುಗಳೇ ಎಂದು ಹೇಳಿದ್ದಾರೆ. ಹುಟ್ಟು ಉಚಿತ ಸಾವು ಖಚಿತ. ಹುಟ್ಟು ಸಾವಿನ ಮಧ್ಯೆ ನಾವೇನು ಮಾಡ್ತೀವಿ ಅನ್ನೋದು ಮುಖ್ಯ ಎಂದ ಡಿ.ಕೆ.ಶಿವಕುಮಾರ್‌, ಕನಕಪುರದ ಜನ ನನನ್ನು ಶಾಸಕನನ್ನಾಗಿ ಮಾಡಿದ್ದಾರೆ. ಸಚಿವನನ್ನಾಗಿ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷನನ್ನಾಗಿ ಮಾಡಿದ್ದಾರೆ ಎಂದು ಕೊಂಡಾಡಿದರು.

Share Post