CrimeDistricts

ಕಲುಷಿತ ನೀರಿಗೆ ಮತ್ತೊಂದು ಬಲಿ; ತನಿಖಾ ತಂಡದಿಂದ ಪರಿಶೀಲನೆ

ರಾಯಚೂರು; ಕಲುಷಿತ ನೀರು ಸೇವಿಸಿ ರಾಯಚೂರಿನಲ್ಲಿ ಮತ್ತೊಬ್ಬರು ಸಾವನ್ನಪ್ಪಿದ್ದಾರೆ. ಅಬ್ದುಲ್‌ ಕರೀಂ ಎಂಬುವವರು ಕಲುಷಿತ ನೀರಿಗೆ ಬಲಿಯಾದ ವ್ಯಕ್ತಿಯಾಗಿದ್ದಾರೆ. ಇದರಿಂದಾಗಿ ಕಲುಷಿತ ನೀರಿಗೆ ನಾಲ್ವರು ಸಾವನ್ನಪ್ಪಿದಂತಾಗಿದೆ.

ಇನ್ನು ಘಟನೆ ಬಗ್ಗೆ ತನಿಖೆ ನಡೆಸಲು ತನಿಖಾ ತಂಡ ಸ್ಥಳಕ್ಕಾಗಮಿಸಿದೆ. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಕಾವೇರಿ ನೇತೃತ್ವದ ತನಿಖಾ ತಂಡದಿಂದ ತನಿಖೆ ನಡೆಸಲಾಗುತ್ತಿದೆ. ಸಾವು, ಆರೋಗ್ಯ ಹಾನಿ ಕುರಿತಂತೆ ತನಿಖಾ ತಂಡ ಪರಿಶೀಲನೆ ನಡೆಸಿದ್ದು, ಸ್ಥಳೀಯರಿಂದ ಮಾಹಿತಿ ಕಲೆ ಹಾಕುತ್ತಿದೆ.

 

Share Post