CrimeDistricts

ದತ್ತಪೀಠ ದಾರಿಯುದ್ಧಕ್ಕೂ ಮೊಳೆಗಳು; ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋಶ

ಚಿಕ್ಕಮಗಳೂರು; ಕಾಫಿನಾಡಿನಲ್ಲಿ ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಯತ್ನ ನಡೆದಿದೆ. ದತ್ತಪೀಠಕ್ಕೆ ಹೋಗುವ ರಸ್ತೆಯುದ್ಧಕ್ಕೂ ಕಿಡಿಗೇಡಿಗಳು ಮೊಳೆಗಳನ್ನು ಹಾಕಲಾಗಿದೆ. ಈ ಬಗ್ಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದಿನಿಂದ ದತ್ತ ಜಯಂತಿಗೆ ಚಾಲನೆ ನೀಡಲಾಗಿದೆ. ಮೊದಲ ದಿನ ಅನುಸೂಯ ಜಯಂತಿ ನಡೆಯುತ್ತಿದ್ದು, ದತ್ತಪೀಠಕ್ಕೆ ತೆರಳಲು ಮಹಿಳೆಯರು ಸಿದ್ಧತೆ ನಡೆಸಿದ್ದರು. ಆದ್ರೆ ಇದೇ ವೇಳೆ ಕೈಮಾರ ಚೆಕ್ ಪೋಸ್ಟ್‌ನಿಂದ ದತ್ತಪೀಠದ ರಸ್ತೆಯುದ್ಧಕ್ಕೂ ಮೊಳೆಗಳನ್ನು ಹಾಕಿರೋದು ಕಂಡುಬಂದಿದೆ. ದರ್ಶನಕ್ಕೆ ಅಡ್ಡಿಪಡಿಸುವ ಉದ್ದೇಶದಿಂದಲೇ ಈ ಕೃತ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

Share Post