CrimeNational

ದ್ವಿಚಕ್ರ ವಾನಹದಲ್ಲಿ ಹೋಗುತ್ತಿದ್ದವರ ಮೇಲೆ ಕರಡಿ ದಾಳಿ; ಮೂವರು ಗಂಭೀರ

ಚೆನ್ನೈ; ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದವರ ಮೇಲೆ ಕರಡಿ ದಾಳಿ ಮಾಡಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿ ತೆಂಕಶಿ ಬಳಿ ನಡೆದಿದೆ. ಶಿವಶೈಲಂನಿಂದ ಪೇಠನ್‍ಪಿಳ್ಳೈಗೆ ಮಸಾಲಾ ಪೊಟ್ಟಣಗಳೊಡನೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಕರುತಿಲಿಂಗಪುರದ ವೈಗುಂಡಮಣಿ ಅವರ ಮೇಲೆ ಕರಡಿ ದಾಳಿ ನಡೆಸಿದೆ. ಇದೇ ವೇಳೆ ನೆರವಿಗೆ ಬಂದ ಇಬ್ಬರ ಮೇಲೂ ಕರಡಿ ದಾಳಿ ಮಾಡಿ ಗಾಯಗೊಳಿಸಿದೆ.

ಬೈಕ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ ಮಾಡಿದ್ದನ್ನು ನೋಡಿದ ಸ್ಥಳೀಯರು ದೂರದಲ್ಲಿ ನಿಂತು ಕಲ್ಲು ತೂರಿದ್ದಾರೆ. ಆದ್ರೆ ಅದು ಅಲ್ಲಿಂದ ಕದಲಿಲ್ಲ. ಅನಂತರ ಇನ್ನು ಒಂದಷ್ಟು ಜನ ಸೇರಿದ್ದಾರೆ. ಇದ್ರಿಂದ ಗಾಬರಿಗೊಂಡ ಕರಡಿ ಜನರ ಗುಂಪಿನ ನಡುವೆ ನುಗ್ಗಿ ಇಬ್ಬರಿಗೆ ತೀವ್ರವಾಗಿ ಗಾಯಗೊಳಿಸಿದೆ.

Share Post