CrimeDistricts

ರೇಪ್‌ ಮಾಡುವುದಾಗಿ ಬೆದರಿಸಿದರು; ಚಿನ್ನಾಭರಣ ದೋಚಿದರು..!

ಮೈಸೂರು; ನಂಜನಗೂಡಿನಲ್ಲಿ ಮಹಿಳೆಯೊಬ್ಬರನ್ನು ಹಾಡಹಗಲೇ ಕಟ್ಟಿಹಾಕಿ ರೇಪ್‌ ಮಾಡುವುದಾಗಿ ಬೆದರಿಸಿ, ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ. ಇಲ್ಲಿ ರಾಮಸ್ವಾಮಿ ಲೇಔಟ್‌ನ ಒಂದಣೇ ಬ್ಲಾಕ್‌ನಲ್ಲಿ ಈ ಕೃತ್ಯ ಎಸಗಲಾಗಿದೆ. 

ಡೂಪ್ಲಿಕೇಟ್ ಪಾರ್ಸಲ್ ಬಾಕ್ಸ್ ಹಿಡಿದು ಪಾರ್ಸಲ್ ಬಂದಿದೆ ಎಂದು ಮಹಿಳೆ ಮನೆಗೆ ಬಾಗಿಲು ಬಡಿದಿದ್ದಾರೆ. ಮಹಿಳೆ ಬಾಗಿಲು ತೆಗೆಯುತ್ತಿದ್ದಂತೆ ಒಳ ನುಗ್ಗಿದ ದರೋಡೆಕೋರರು ಮಹಿಳೆಯನ್ನು ಬೆದರಿಸಿ ಕೈಕಾಲುಗಳನ್ನು ಕಟ್ಟಿದ್ದಾರೆ. ತರುವಾಯ ಬಾಯಿಗೆ ಪ್ಲಾಸ್ಟರ್ ಅಂಟಿಸಿ ಕೂಗಾಡಿದರೆ ರೇಪ್ ಮಾಡುವುದಾಗಿ ಬೆದರಿಸಿದ್ದಾರೆ.

ಮಹಿಳೆಯ ಮೈ ಮೇಲಿದ್ದ ಚಿನ್ನದ ಮಾಂಗಲ್ಯ ಸರ, ಕೈ ಬಳೆ, ಉಂಗುರ ಹಾಗೂ ಕೊಠಡಿಯ ಬೀರುವಿನಲ್ಲಿದ್ದ ಮತ್ತೊಂದು ಜೊತೆ ಕೈ ಬಳೆ ನೆಕ್ಲೆಸ್, ತಲೆಬೊಟ್ಟು ಸೇರಿದಂತೆ ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಪ್ರೌಢಶಾಲಾ ಶಿಕ್ಷಕ ಶಂಭುಸ್ವಾಮಿ ಎಂಬುವವರ ಪತ್ನಿ ದಾಕ್ಷಾಯಿಣಿ ಎಂಬುವವರೇ ಚಿನ್ನ ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಮಹಿಳೆ.

 

Share Post