Districts

ನಿರಂತರ ಮಳೆಯಿಂದ ಹತ್ತಿ ಬೆಳೆ ಹಾನಿ; ರೈತನಿಗೆ ಸಂಕಟ!

ತುಮಕೂರು; ನಿರಂತರ ಮಳೆಯಿಂದ ಹತ್ತಿ ಬೆಳೆಗೆ ಹಾನಿಯಾಗಿದೆ.. ತುಮಕೂರು ಜಿಲ್ಲೆ ಶಿರಾದಲ್ಲಿ ನಾಲ್ಕು ಎಕರೆ ಹತ್ತಿ ಬೆಳೆ ನಾಶವಾಗಿದೆ..

ಶಿರಾದ ತಡಕಲೂರು ಗ್ರಾಮದಲ್ಲಿ ನಡೆದ ಘಟನೆ.ಕಳೆದ ರಾತ್ರಿ ಸುರಿದ ಮಳೆಗೆ ಹತ್ತಿ ಬೆಳೆಯ ಜಮೀನು ಜಲಾವೃತ.ರೈತರಾದ ರವಿ ಮತ್ತು ಗೋವಿಂದ ಎಂಬುವರು ಬೆಳೆದಿದ್ದ ಹತ್ತಿ ಬೆಳೆ.

4-5 ಲಕ್ಷ ಖರ್ಚು ಮಾಡಿ ಹತ್ತಿ‌ ಬೆಳೆದಿದ್ದ ರೈತರು.ಅಂದಾಜು 7-8 ಲಕ್ಷ ರೂಪಾಯಿ ಹಣ ಗಳಿಸುವ ನಿರೀಕ್ಷೆ ಹೊಂದಿದ್ದ ರೈತರು.

ಹತ್ತಿ‌ಬೆಳೆ ನಷ್ಟ ದಿಂದ ಕಂಗಾಲಾಗಿರುವ ರೈತರು.ಬೆಳೆ ನಷ್ಟ ಪರಿಹಾರ ನೀಡುವಂತೆ ಮನವಿ.

Share Post