DistrictsPolitics

ಶಾಸಕ ಪ್ರೀತಂ ಗೌಡ ವಿರುದ್ಧ ಭವಾನಿ ರೇವಣ್ಣ ಏಕವಚನದಲ್ಲೇ ವಾಗ್ದಾಳಿ..!

ಹಾಸನ; ಹೆಚ್‌.ಡಿ.ರೇವಣ್ಣ ಏಳನೇ ಕ್ಲಾಸ್‌ ಓದಿದವರು ಎಂದು ಹಾಸನ ಶಾಸಕ ಪ್ರೀತಂ ಗೌಡ ಹೇಳಿದ್ದಕ್ಕೆ ಭವಾನಿ ರೇವಣ್ಣ ಏಕವಚನದಲ್ಲೇ ತಿರುಗೇಟು ನೀಡಿದ್ದಾರೆ. ಹಳ್ಳಿ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್‌ ಒಬ್ಬರು ರೇವಣ್ಣ ಅವರ ಬಳಿ ಬಂದು ಹೆಂಡತಿ, ಮಕ್ಕಳನ್ನು ಸಾಕಲು ಆಗುತ್ತಿಲ್ಲ, ದಮ್ಮಯ್ಯ ಅನ್ನುತ್ತೇನೆ ಬಿಬಿಎಂಪಿಗೆ ಹಾಕಿಸಿಕೊಡಿ ಎಂದು ಹೇಳಿದ್ದರು. ರೇವಣ್ಣ ಅವರ ಸಹಾಯದಿಂದ ಬಿಬಿಎಂಪಿಗೆ ವರ್ಗವಾಗಿದ್ದರು. ಈಗ ಅವರ ಮಗ ರೇವಣ್ಣ ಅವರ ಬಗ್ಗೆ ಮಾತನಾಡುತ್ತಾನೆ ಎಂದು ಏಕವಚನದಲ್ಲೇ ಹರಿಹಾಯ್ದಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭವಾನಿ ರೇವಣ್ಣ ಮಾತನಾಡಿದರು. ರೇವಣ್ಣ ಅವರು ವರ್ಷದಲ್ಲಿ ೫೦ ದಿನ ಬೆಂಗಳೂರಿನಲ್ಲಿ ನಡೆಯುವ ಮೀಟಿಂಗ್‌ಗಳಿಗೆ ಹೋಗುತ್ತಾರೆ. ಉಳಿದ ದಿನಗಳಲ್ಲಿ ಸಮಯ ವ್ಯರ್ಥ ಮಾಡದೆ ಹಳ್ಳಿ ಹಳ್ಳಿಗೆ ಹೋಗುತ್ತಾರೆ ಎಂದು ಭವಾನಿ ಇದೇ ವೇಳೆ ಹೇಳಿದ್ದಾರೆ.

Share Post