CrimeDistricts

ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಕೊಲೆ; ನಲವತ್ತಕ್ಕೂ ಹೆಚ್ಚು ಬಾರಿ ಇರಿದು ಬರ್ಬರ ಹತ್ಯೆ

ಹುಬ್ಬಳ್ಳಿ; ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿಯವರನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ಹುಬ್ಭಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಚಂದ್ರಶೇಖರ ಗುರೂಜಿಯವರನ್ನು ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸ್‌ ಕಮೀಷನರ್‌ ಲಾಬೂರಾಮ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಬ್ಯುಸಿನೆಸ್‌ ವಿಚಾರವಾಗಿ ಚಂದ್ರಶೇಖರ ಗುರೂಜಿಯವರು ಹುಬ್ಬಳ್ಳಿಗೆ ಬಂದಿದ್ದರು. ಹುಬ್ಬಳ್ಳಿ ನಗರದ ಉಣಕಲ್‌ ಕೆರೆ ಬಳಿಯ ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ ತಂಗಿದ್ದರು. ಈ ವೇಳೆ ಆಗಮಿಸಿದ್ದ ದುಷ್ಕರ್ಮಿಗಳು, ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.  ಚೇರ್‌ ಮೇಲೆ ಕುಳಿತಿದ್ದ ಗುರೂಜಿಯ ಬಳಿ ಇಬ್ಬರು ವ್ಯಕ್ತಿಗಳು ಬಂದಿದ್ದು, ಅದ್ರಲ್ಲಿ ಒಬ್ಬ ವ್ಯಕ್ತಿ ಕಾಲಿಗೆ ಬೀಳಲು ಹೋಗುತ್ತಾನೆ. ಈ ವೇಳ ಇನ್ನೊಬ್ಬ ಚಾಕುವಿನಿಂದ ಚುಚ್ಚಿದ್ದಾನೆ. ಗುರೂಜಿ ಕೆಳಗೆ ಬೀಳುತ್ತಿದ್ದಂತೆ ನಲವತ್ತಕ್ಕೂ ಹೆಚ್ಚು ಬಾಲಿ ಚಾಕುವಿನಿಂದ ಚುಚ್ಚಲಾಗಿದೆ. ಅನಂತರ ಕತ್ತು ಕುಯ್ದು ಪರಾರಿಯಾಗಿದ್ದಾರೆ

ಮೃತದೇಹವನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ತರಲಾಗಿದೆ. ಈ ಕೊಲೆ ಯಾಕೆ ನಡೆಯಿತು. ಯಾರು ಮಾಡಿದರು ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಭಕ್ತರಂತೆ ಬಂದ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.   ಸರಳವಾಸ್ತು ಮೂಲಕ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಚಂದ್ರಶೇಖರ ಗುರೂಜಿ ಖ್ಯಾತರಾಗಿದ್ದರು. ಸರಳ ಜೀವನ ಎಂಬ ವಾಹಿನಿಯನ್ನೂ ಕೂಡಾ ತೆರೆದಿದ್ದ ಅವರು, ಲಾಸ್‌ ಆಗಿದ್ದರಿಂದ ಕೆಲ ವರ್ಷದ ಹಿಂದೆ ಅದನ್ನು ಮುಚ್ಚಿದ್ದರು. ಅನಂತರ ಅವರು ಸರಳ ವಾಸ್ತು ಬದಲಾಗಿ ಮಾನವ ಗುರು ಹೆಸರಿನಲ್ಲಿ ವಾಸ್ತು ಪರಿಹಾರಗಳನ್ನು ನೀಡುತ್ತಿದ್ದರು.

 

 

Share Post