CrimeDistricts

ಚೈತ್ರಾ ತಪ್ಪು ಮಾಡಿಲ್ಲ, ಕೆಲವರು ಈ ಸ್ಥಿತಿಗೆ ತಂದಿದ್ದಾರೆ; ಚೈತ್ರಾ ತಾಯಿ ರೋಹಿಣಿ ಹೇಳಿಕೆ

ಕುಂದಾಪುರ; ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ. ಕೆಲವರು ನನ್ನ ಮಗಳನ್ನು ಬಳಸಿಕೊಂಡು ಈ ಸ್ಥಿತಿಗೆ ತಂದಿದ್ದಾರೆ ಎಂದು ವಂಚನೆ ಪ್ರಕರಣದಲ್ಲಿ ಬಂಧಿತಳಾಗಿರುವ ಚೈತ್ರಾ ಕುಂದಾಪುರಳ ತಾಯಿ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಚೈತ್ರಾ ತಾಯಿ ರೋಹಿಣಿ, ಮಗಳ ಈಗಿನ ಸ್ಥಿತಿ ಕಂಡು ಬಹಳ ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ.

ಚೈತ್ರಾ ಬಂಧನವಾದ ದಿನವೇ ಪೊಲೀಸರು ನನಗೆ ಫೋನ್‌ ಮಾಡಿದ್ದರು. ಚೈತ್ರಾ ಜೊತೆಗೂ ಮಾತನಾಡಿಸಿದರು. ಧೈರ್ಯದಿಂದ ಇರಿ, ನಾನು ಎಲ್ಲಾ ನೋಡಿಕೊಳ್ಳುತ್ತೇನೆ. ಏನೂ ಆಗುವುದಿಲ್ಲ ಎಂದು ಅಂದು ಚೈತ್ರ ಹೇಳಿದಳು ಎಂದು ಆಕೆಯ ತಾಯಿ ರೋಹಿಣಿ ಹೇಳಿದ್ದಾರೆ. ನನ್ನ ಮಗಳು ತನ್ನ ಕೈಯಿಂದ ಹಣ ಖರ್ಚು ಮಾಡುತ್ತಿದ್ದಳು. ಬೇರೊಬ್ಬರ ಹಣಕ್ಕೆ ಆಸೆಪಡುತ್ತಿರಲಿಲ್ಲ. ಆದ್ರೆ ಏನೂ ಮಾಡದಿದ್ದರೂ ಆಕೆಯನ್ನು ಬಂಧಿಸಲಾಗಿದೆ. ನಮಗೆ ಆಕೆ ಯಾವ ಕಷ್ಟವೂ ಕೊಡುವುದಿಲ್ಲ. ಅವಳೇ ಎಲ್ಲವನ್ನೂ ನಿಭಾಯಿಸುತ್ತಾಳೆ ಎಂಬ ನಂಬಿಕೆ ನಮಗಿದೆ ಎಂದು ರೋಹಿಣಿ ಹೇಳಿದ್ದಾರೆ.

 

Share Post