Districts

ನಿಂತಿದ್ದ ಕ್ಯಾಂಟರ್‌ಗೆ ಅಪರಿಚಿತ ವಾಹನ ಡಿಕ್ಕಿ; ನಾಲ್ವರ ದುರ್ಮರಣ..!

ಬಾಗಲಕೊಟೆ; ಟೈರ್‌ ಪಂಕ್ಚರ್‌ ಆಗಿದ್ದರಿಂದ ರಸ್ತೆ ಬದಿ ನಿಂತಿದ್ದ ಕ್ಯಾಂಟರ್‌ಗೆ ಅಪರಿತ ವಾಹನ ಡಿಕ್ಕಿಯಾಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಡಿಕ್ಕಿ ಹೊಡೆದ ನಂತರ ಆ ವಾಹನ ಚಾಲಕ ನಿಲ್ಲಿಸದೇ ಪರಾರಿಯಾಗಿದ್ದಾನೆ.

ಈ ಘಟನೆ ನಡೆದಿರೋದು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಾಡಗಂಡಿ ಬಳಿ.  ವಿಜಯಪುರ ಜಿಲ್ಲೆ ಕಾರಜೋಳ ಗ್ರಾಮದಿಂದ ಕ್ಯಾಂಟರ್‌ನಲ್ಲಿ ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ಹೋಗಲಾಗುತ್ತಿತ್ತು. ಈ ವೇಳೆ ಬಾಡಗಂಡಿ ಬಳಿ ಟೈರ್‌ ಪಂಕ್ಚರ್‌ ಆಗಿದೆ. ಹೀಗಾಗಿ ಕ್ಯಾಂಟರ್‌ನಲ್ಲಿದ್ದವರೆಲ್ಲಾ ಕೆಳಗಿಳಿದು ಟೈರ್‌ ಬದಲಾಯಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದು ಎಸ್ಕೇಪ್‌ ಆಗಿದೆ.

ಘಟನೆಯಲ್ಲಿ ರಜಾಕ್ ತಾಂಬೊಳೆ(54), ನಾಶಿರ್ ಮುಲ್ಲಾ(42), ಮಲ್ಲಪ್ಪ ಮಳಲಿ(42), ರಾಮಸ್ವಾಮಿ(36) ಎಂಬುವವರು ಮೃತಪಟ್ಟಿದ್ದಾರೆ.

 

Share Post