Districts

ಮಂತ್ರಾಲಯ ಗುರು ರಾಯರ ದರ್ಶನ ಪಡೆದ ಬಿಎಸ್‌ವೈ ಕುಟುಂಬ

ರಾಯಚೂರು; ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕುಟುಂಬದ ಸದಸ್ಯರೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ಇಂದು ಮುಂಜಾನೆಯೇ ಶ್ರೀರಾಘವೇಂದ್ರ ಸ್ವಾಮಿಗಳ ವೃಂದಾವನದ ದರ್ಶನ ಪಡೆದರು. ನಂತರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರನ್ನು ಭೇಟಿಮಾಡಿ ಆಶೀರ್ವಾದ ಪಡೆದರು. ಬಿ.ವೈ.ವಿಜಯೇಂದ್ರ ಹಾಗೂ‌‌‌ ಬಿ.ವೈ.ರಾಘವೇಂದ್ರ ದಂಪತಿ ಸಮೇತರಾಗಿ ಬಂದಿದ್ದರು.

ಮೊದಲಿಗೆ ಇಂದು ಬೆಳಗ್ಗೆ ಶ್ರೀಮಠಕ್ಕೆ ಆಗಮಿಸಿ, ಗ್ರಾಮದ ದೇವತೆ ಶ್ರೀ ಮಂಚಾಲಮ್ಮ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ರಾಯರ ಬೃಂದಾವನ ದರ್ಶನ ಪಡೆದ ಯಡಿಯೂರಪ್ಪ ಕುಟುಂಬ ಅಭಿಷೇಕ ‌ಸಲ್ಲಿಸಿತು.

Share Post