BengaluruCrimeDistricts

ಸೋಷಿಯಲ್‌ ಮೀಡಿಯಾ ಹಾವಳಿಯಿಂದ ಬೇಸರ; ಪೊಲೀಸರ ಮೊರೆ ಹೋದ ಪರಮೇಶ್ವರ್‌

ಬೆಂಗಳೂರು; ಸೋಷಿಯಲ್‌ ಮೀಡಿಯಾದಲ್ಲಿ ಅವಹೇಳನ ಬರವಣಿಗೆಗಳಿಂದ ಬೇಸತ್ತಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌ ಅವರು ಪೊಲೀಸರ ಮೊರೆ ಹೋಗಿದ್ದಾರೆ. ಕೆಲವರು ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ನಲ್ಲಿ ಅವಹೇಳನ ಪೋಸ್ಟ್‌ ಹಾಗೂ ವಿಡಿಯೋಗಳನ್ನು ಹಾಕುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪರಮೇಶ್ವರ್‌ ಆಗ್ರಹಿಸಿದ್ದಾರೆ.

ನನ್ನ ಬಗ್ಗೆ ಹಾಗೂ ನನ್ನ ಮಗಳ ಬಗ್ಗೆ ವೀಡಿಯೋ ಹಾಕಿ ಅವಹೇಳನ ಮಾಡಿದ್ದಾರೆ. ಫೇಸ್ ಬುಕ್ ಹಾಗೂ ಯೂಟ್ಯೂಬ್ ನಲ್ಲಿ ನಕಲಿ ಖಾತೆ ತೆರೆದು ಈ ರೀತಿ ಮಾಡಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ. ಈ ಮೂಲಕ ನನ್ನನ್ನು ರಾಜಕೀಯವಾಗಿ ಕುಗ್ಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪರಮೇಶ್ವರ್‌ ಆರೋಪ ಮಾಡಿದ್ದಾರೆ.

ಪರಮೇಶ್ವರ್‌ ಅವರು ತಮ್ಮ ಆಪ್ತರೊಬ್ಬರ ಮೂಲಕ ಈ ಬಗ್ಗೆ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಪೊಲೀಸರು ಬಗ್ಗೆ ತನಿಖೆ ಕೈಗೊಂಡಿದ್ದಾರೆ.

Share Post