DistrictsPolitics

ಇಂದಿನಿಂದ ಬೆಳಗಾವಿ ಅಧಿವೇಶನ; ಗುದ್ದಾಟಕ್ಕೆ ಸಾಕ್ಷಿಯಾಗುತ್ತಾ ಸಾವರ್ಕರ್‌ ಫೋಟೋ

ಬೆಳಗಾವಿ; ಇಂದಿನಿಂದ ಬೆಳಗಾವಿ ಚಳಗಾಲದ ಅಧಿವೇಶನ ಶುರುವಾಗುತ್ತದೆ. ಆದ್ರೆ ಮೊದಲ ದಿನದಿಂದಲೇ ಅಧಿವೇಶನ ರಂಗೇರುವ ಮುನ್ಸೂಚನೆ ಸಿಗುತ್ತಿದೆ. ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಸಾವರ್ಕರ್‌ ಫೋಟೋ ಅನಾವರಣಕ್ಕೆ ಸಿದ್ಧತೆ ಮಾಡಲಾಗಿದೆ. ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಲು ಸಿದ್ಧತೆ ನಡೆದಿದೆ. ಹೀಗಾಗಿ ಮೊದಲ ದಿನವೇ ಕಲಾಪದಲ್ಲಿ ಕೋಲಾಹಲ ಏರ್ಪಡುವ ಸಾಧ್ಯತೆ ಇದೆ.

ಸಭಾಂಗಣದಲ್ಲಿ ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್‌ ಸೇರಿ ಒಟ್ಟು ಏಳು ಜನರ ಭಾವಚಿತ್ರಗಳನ್ನು ಅಧಿವೇಶನದ ಮೊದಲ ದಿನ ಅನಾವರಣ ಮಾಡಲು ಸಿದ್ಧತೆ ನಡೆದಿದೆ.

Share Post