CrimeDistricts

ಗಡಿಯಲ್ಲಿ ಜೋರಾಯ್ತು ಕನ್ನಡ ಸಂಘಟನೆಗಳ ಹೋರಾಟ; ಲಾರಿಗಳ ಮೇಲೆ ಕಲ್ಲು

ಬೆಳಗಾವಿ; ಬೆಳಗಾವಿ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುತ್ತೇನೆ ಎಂದು ಹೇಳಿದ್ದರು. ಜೊತೆಗೆ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಅವಮಾನ ಮಾಡಲಾಗಿತ್ತು. ಇದರಿಂದಾಗಿ ರೊಚ್ಚಿಗೆದ್ದ ಕನ್ನಡ ಪರ ಸಂಘಟನೆಗಳ ಹೋರಾಟಗಾರರು, ಹಿರೇಬಾಗೇವಾಡಿ ಟೋಲ್‌ ಬಳಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಮಹಾರಾಷ್ಟ್ರದ ಲಾರಿಗಳನ್ನು ತಡೆದ ಪ್ರತಿಭಟನಾಕಾರರು ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದರು. ಲಾರಿಗಳ ಮೇಲೆ ಹತ್ತಿ ನಾಡ ಧ್ವಜಗಳನ್ನು ಪ್ರದರ್ಶನ ಮಾಡಿದರು.

Share Post