CrimeDistricts

ದನ ಮೇಯಿಸುತ್ತಿದ್ದಾಗ ದಾಳಿ; ರೈತನ ಬಲಿ ಪಡೆದ ಹುಲಿ

ಮೈಸೂರು; ದನ ಮೇಯಿಸುತ್ತಿದ್ದಾಗ ಹುಲಿಯೊಂದು ದಾಳಿ ಮಾಡಿದ್ದು, ರೈತನೊಬ್ಬನನ್ನು ಕೊಂದು ಅರ್ಧ ದೇಹ ತಿಂದಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಹುಣಸೂರು ತಾಲ್ಲೂಕಿನ ಉಡವೇಪುರ ಗ್ರಾಮದ ರೈತ ಗಣೇಶ್‌ ಎಂಬುವವರೇ ಹುಲಿ ದಾಳಿಗೆ ತುತ್ತಾದವರು. ಇವರು ನಾಗರಹೊಳೆ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಬಫರ್ ಜೋನ್ ನಲ್ಲಿ  ದನಗಳನ್ನು ಮೇಯಿಸುತ್ತಿದ್ದರು. ಈ ವೇಳೆ ಹುಲಿ ದಾಳಿ ಮಾಡಿದ್ದು, ಗಣೇಶ್‌ ಅವರನ್ನು ಕೊಂದಿದೆ. ನಂತರ ಅವರ ದೇಹವನ್ನು ಅರ್ಧ ತಿಂದು ಉಳಿದ ದೇಹವನ್ನು ಬಿಟ್ಟುಹೋಗಿದೆ.

ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ದನಗಳು ಸಂಜೆ ಮನೆಗೆ ವಾಪಸ್ಸಾಗಿವೆ. ಆದ್ರೆ ಗಣೇಶ್‌ ಅವರು ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ಕೊಟ್ಟಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನಲ್ಲಿ ಹುಡುಕಾಟ ನಡೆಸಿದಾಗ, ಮುದ್ದನಹಳ್ಳಿ ಅರಣ್ಯದ ಬಫರ್ ಏರಿಯಾದ ಪ್ರದೇಶದ ಕೆರೆ ಬಳಿ ಗಣೇಶ್‌ರ ಅರ್ಧ ಮೃತದೇಹ ಸಿಕ್ಕಿದೆ.

ಸ್ಥಳಕ್ಕೆ ಶಾಸಕ ಜಿ.ಡಿ.ಹರೀಶ್‌ ಗೌಡ ಭೇಟಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ.

 

Share Post