DistrictsPolitics

ಪಿಂಪ್‌ಗಳಿಂದ ಹಣ ಮಾಡೋ ಸ್ಥಿತಿ ಬಂದ್ರೆ ಆತ್ಮಹತ್ಯೆ; ಆರಗ

ಶಿವಮೊಗ್ಗ; ಪಿಂಪ್‌ ಗಳಿಂದ ಹಣ ಮಾಡುವ ಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವ್ರು, ಸ್ಯಾಂಟ್ರೋ ರವಿ ಯಾರೆಂಬುದೇ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಮನೆಗೆ ಸಾವಿರಾರು ಜನರು ಬಂದು ಹೋಗ್ತಾರೆ. ಎಲ್ಲರ ಕ್ಯಾರೆಕ್ಟರ್ ಸರ್ಟೀಫೀಕೆಟ್ ನೋಡಿ ಒಳಗೆ ಬಿಡಲು ಆಗಲ್ಲ. ವಿನಾಕಾರಣ ನನ್ನ ಹೆಸರು ಹೇಳಿ ಗೊಂದಲ ಸೃಷ್ಟಿಸಿರೋದು ಸರಿಯಲ್ಲ ಎಂದ ಆರಗ ಜ್ಞಾನೇಂದ್ರ, ಗೃಹ ಸಚಿವರು ಗುಜರಾತ್ ಗೆ ಹೋಗಿದ್ದಾಗ ಸ್ಯಾಂಟ್ರೋ ರವಿ ಬಂಧನ ಅನುಮಾನ ತಂದಿದೆ ಎಂಬ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕಿಡಿಕಾರಿದರು. ಗುಜರಾತ್ ನಲ್ಲಿ ನನ್ನ ಕಾರ್ಯಕ್ರಮ 6 ತಿಂಗಳ ಹಿಂದೆ ನಿಗದಿಯಾಗಿತ್ತು. ನಾನು ಎಲ್ಲಿಗೆ ಹೋಗಿದ್ದೆ ಎಂಬ ಬಗ್ಗೆ ಮಾಹಿತಿ ಸರ್ಕಾರದ ಬಳಿ ಇರುತ್ತದೆ. ಕುಮಾರಸ್ವಾಮಿಯವರ ಆರೋಪದಲ್ಲಿ ಹುರುಳಿಲ್ಲ ಎಂದರು.

Share Post