Districts

ತುಂಗಭದ್ರಾ ಡ್ಯಾಮ್‌ ಬಳಿ ಆತಂಕ; ಹೈವೋಲ್ಟೇಜ್‌ ಮೀಟಿಂಗ್‌!

ವಿಜಯನಗರ; ತುಂಗಭದ್ರಾ ಡ್ಯಾಮ್‌ನ 19ನೇ ಗೇಟ್  ಲಿಂಕ್‌ ತುಂಡರಿಸಿದ್ದು, ನದಿ ಪಾತ್ರದಲ್ಲಿ ಭಾರೀ ಆತಂಕ ಶುರುವಾಗಿದೆ.. ಇತ್ತ ಅಧಿಕಾರಿಗಳು ಅಲರ್ಟ್‌ ಆಗಿದ್ದು, ಸಮಸ್ಯೆ ಸರಿಪಡಿಸಲು ಏನು ಮಾಡಬೇಕು ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ.. ಬೆಂಗಳೂರಿನಿಂದ ತಜ್ಞರನ್ನು ಕರೆಸಲಾಗುತ್ತಿದೆ.. ಇತ್ತ ತುಂಗಭದ್ರಾ ಜಲಾಶಯದ ವೈಕುಂಠ ಅಥಿತಿ ಗೃಹದಲ್ಲಿ ಅಧಿಕಾರಿಗಳಿಂದ ಸಭೆ ನಡೆಸಲಾಗುತ್ತಿದೆ.. ಟಿಬಿ ಬೋರ್ಡ್ ಕಾರ್ಯದರ್ಶಿ ಓಆರ್ ಕೆ ರೆಡ್ಡಿ ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ..
ಅಧಿಕಾರಿಗಳು ಹೇಳುವ ಪ್ರಕಾರ ಸದ್ಯ ಡ್ಯಾಮ್‌ಗೆ ಯಾವುದೇ ತೊಂದರೆ ಇಲ್ಲ.. ಆದ್ರೆ ಗೇಟ್‌ ಲಿಂಕ್‌ ತುಂಡರಿಸಿದ್ದರಿಂದ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್‌ ನೀರು ನದಿಗೆ ಬಿಡಲಾಗುತ್ತಿದೆ.. ಇದರಿಂದಾಗಿ ಹಂಪಿಯ ಸ್ಮಾರಕಗಳು ಮುಳುಗಿವೆ.. ಸ್ಥಳೀಯರಲ್ಲಿ ಪ್ರವಾಹ ಭೀತಿ ಉಂಟಾಗಿದೆ..

Share Post