DistrictsPolitics

ರಾಜ್ಯದಲ್ಲಿ ಕಮಲ ಅರಳಿಸಲು ಅಮಿತ್ ಷಾ ಪಣ: ಬೆಂಗಳೂರಲ್ಲೆ ಠೀಕಾಣಿ ಹೂಡಲಿರುವ ಚಾಣಕ್ಯ.

ಬಾಗಲಕೋಟೆ: ರಾಜ್ಯದಲ್ಲಿ ಕಮಲ ಅರಳಿಸಲು ಕೇಂದ್ರ ಬಿಜೆಪಿ ನಾಯಕ ಚುನಾವಣಾ ಚಾಣಕ್ಯ ಶಪಥ ಮಾಡಿದ್ದು, ಬೆಂಗಳೂರಿನಲ್ಲೆ ಮನೆ ಮಾಡಲಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಉತ್ತರ ಭಾರತದಲ್ಲಿ ಒಂದೊಂದೆ ರಾಜ್ಯಗಳನ್ನ ತಮ್ಮ ಕೈವಶ ಮಾಡಿಕೊಳ್ಳುತ್ತಿರುವ ಬಿಜೆಪಿ ಇದೀಗ ದಕ್ಷಿಣ ಭಾರತದತ್ತ ಮುಖ ಮಾಡಿದೆ. ದಕ್ಷಿಣ ಭಾರತದಲ್ಲೆ ಕಾಂಗ್ರೇಸ್ ಪ್ರಭಲವಾಗಿರುವ ಕರ್ನಾಟಕದ ಮೇಲೆ ಇದೀಗ ಕೇಂದ್ರ ಬೀಜೆಪಿ ಕಣ್ಣು ಬಿದ್ದಿದೆ. ರಾಜ್ಯ ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಬಿಜೆಪಿ ನಾಯಕರು ಪದೇ ಪದೇ ರಾಜ್ಯಕ್ಕೆ ಆಗಮಿಸಿ ರಾಜ್ಯ ಬಿಜೆಪಿಗೆ ಶಕ್ತಿ ತುಂಬುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಸಾಲದು ಎಂಬಂತೆ ಇದೀಗ ಬಿಜೆಪಿ ಚಾಣಾಕ್ಯ ಅಮಿತ್ ಷಾ ಬೆಂಗಳೂರಿನಲ್ಲೆ ಮನೆ ಮಾಡಿಕೊಂಡು ಠೀಕಾಣಿ ಹೂಡಲಿದ್ದು, ಕರ್ನಾಟಕದಲ್ಲಿ ಕಮಲ ಪಕ್ಷವನ್ನ ಅಧಿಕಾರಕ್ಕೆ ತರುವ ಶಪಥ ಮಾಡಿದ್ದಾರೆ.

ಈ ಬಗ್ಗೆ ಬಾಗಲಕೊಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಂದಾಯ ಸಚಿವ ಆರ್ ಅಶೋಕ್ ಡಬಲ್ ಇಂಜಿನ್ ಸರ್ಕಾರವನ್ನ ಮತ್ತೆ ಅಧಿಕಾರಕ್ಕೆ ತರಲು ಅಮಿತ್ ಷಾ ಹಾಗೂ ಧರ್ಮೆಂದ್ರ ಪ್ರಧಾನ್ ಬೆಂಗಳೂರಿನಲ್ಲೆ ಮನೆ ಮಾಡಲಿದ್ದು ಇಲ್ಲೆ ಬಂದು ಇರುತ್ತಾರೆ ಎಂದಿದ್ದಾರೆ.

ನಮ್ಮದು ನಾಳೆ ಬಾ ಅನ್ನೋ ಪಾರ್ಟಿ ಅಲ್ಲಾ,ಇಂದಿನ ಪಾರ್ಟಿ, ಅಮಿತ್ ಷಾ, ಧರ್ಮೆಂದ್ರ ಪ್ರಧಾನ್ ಎಲ್ಲರೂ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನ ಗೆಲ್ಲಿಸಬೇಕು ಎಂದು ಇಲ್ಲಿಗೆ ಬರುತ್ತಿದ್ದಾರೆ. ಸೂರ್ಯ ಚಂದ್ರರಿರೋದು ಎಷ್ಟು ಸತ್ಯವೋ ನಮ್ಮ ಸರ್ಕಾರ ಬರುವುದು ಅಷ್ಟೇ ಸತ್ಯ. ಅಮಿತ್ ಷಾ ಬೆಂಗಳೂರಿನಲ್ಲಿ ಮನೆ ಮಾಡುವುದು ಪಕ್ಕಾ, ಡೌಟೇ ಇಲ್ಲಾ ಎಂದರು.

Share Post