DistrictsPolitics

ಅಂಬಿಕಾಪತಿದು ಎಸ್‌ಎಸ್‌ಟಿ ಕಲೆಕ್ಷನ್‌, ಸಂತೋಷ್‌ದು ವೈಎಸ್‌ಟಿ ಕಲೆಕ್ಷನ್;‌ ಹೆಚ್ಡಿಕೆ

ಮೈಸೂರು; ಐಟಿ ದಾಳಿ ವೇಳೆ ಇಬ್ಬರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿತ್ತು. ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಸಿಕ್ಕ ಹಣ ಎಸ್‍ಎಸ್‍ಟಿ ಕಲೆಕ್ಷನ್, ಸಂತೋಷ್ ಮನೆಯಲ್ಲಿ ಸಿಕ್ಕಿದ್ದು ವೈಎಸ್‍ಟಿ ಕಲೆಕ್ಷನ್ ಎಂದು ಹೇಳುವ ಮೂಲಕ ಹೊಸ ಬಾಂಬ್‌ ಸಿಡಿಸಿದ್ದಾರೆ.

ರಾಜ್ಯದಲ್ಲಿ ವೈಎಸ್‍ಟಿ ಆಯ್ತು, ಈಗ ಎಸ್‍ಎಸ್‍ಟಿ ಟ್ಯಾಕ್ಸ್ ಕಲೆಕ್ಷನ್ ಜೋರಾಗಿ ನಡೆಯುತ್ತಿದೆ. ಐಟಿ ದಾಳಿಯಲ್ಲಿ ಸಿಕ್ಕ ಕೋಟಿ ಕೋಟಿ ಹಣ ಎಸ್‍ಎಸ್‍ಟಿ ಟ್ಯಾಕ್ಸ್ ಗೆ ಸೇರಿದ್ದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸಿಎಂ ಈ ಬಗ್ಗೆ ತನಿಖೆ ಮಾಡಿ ಪ್ರಾಮಾಣಿಕತೆ ತೋರಬೇಕು ಎಂದೂ ಆಗ್ರಹಿಸಿದ್ದಾರೆ.

 

Share Post