CrimeDistricts

ಮೈಸೂರಿನಲ್ಲಿ ಸಿಡಿಮದ್ದು ತಾಲೀಮು ವೇಳೆ ಅವಘಡ; ಸಿಬ್ಬಂದಿಗೆ ಗಾಯ

ಮೈಸೂರು; ಇಂದು ಆಯುಧ ಪೂಜೆ ಸಂಭ್ರಮ. ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ದಸರಾ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವೈಭವದ ಕಾರ್ಯಕ್ರಮಗಳ ನಡೆಯುತ್ತಿವೆ. ಸಂಪ್ರದಾಯದಂತೆ ನಿನ್ನೆ ಸಂಜೆ ಅರಮನೆ ಆವರಣದಲ್ಲಿ ಸಿಡಿಮದ್ದು ತಾಲೀಮು ನಡೆಸಲಾಯಿತು. ಈ ವೇಳೆ ಅವಘಡವೊಂದು ನಡೆದಿದೆ. 

ನಿನ್ನೆ ಸಂಜೆ ಪುಷ್ಪಾರ್ಚನೆ ರಿಹರ್ಸಲ್‌ ನಡೆಯುತ್ತಿತ್ತು. ಜಂಬೂ ಸವಾರಿಗೆ ಪುಷ್ಪಾರ್ಚನೆ ನಡೆಸಿ 21 ಸುತ್ತು ಕುಶಾಲತೋಪು ಹಾರಿಸಲಾಯಿತು. ಈ ವೇಳೆ ಸಿಡಿಮದ್ದು ಹಾರಿ ಸಿಬ್ಬಂದಿಗೆ ಸುಟ್ಟು ಗಾಯಗಳಾಗಿವೆ.

ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

 

Share Post