BengaluruCrime

ಬೆಳ್ಳಂಬೆಳಗ್ಗೆ ಮೊಳಗಿದ ಖಾಕಿ ತುಪಾಕಿ: ರೌಡಿಶೀಟರ್‌ ಕಾಲಿಗೆ ಗುಂಡು

ಬೆಂಗಳೂರು:   ಗಾಂಜಾ ದಂಧೆಯಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಮೇಲೆ ಪೊಲೀಸರು ಫೈರಿಂಗ್‌ ಮಾಡಿರುವ ಘಟನೆ ಕೋಣನಕುಂಟೆಯ ನಾರಾಯಣನಗರದಲ್ಲಿ ನಡೆದಿದೆ. ರಾಹುಲ್‌ ಅಲಿಯಾಸ್‌ ಸ್ಟಾರ್‌ ರಾಹುಲ್‌ ಗುಂಡೇಟು ತಿಂದಿರುವ ಆರೋಪಿ. ೧೯ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಇಂದು ಅರೆಸ್ಟ್‌ ಆಗಿದ್ದಾನೆ.

ಆರೋಪಿ ವಿರುದ್ಧ ಅರೆಸ್ಟ್‌ ವಾರೆಂಟ್‌ ಜಾರಿಯಾಗಿತ್ತು. ಈ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ರಾಹುಲ್‌ ಇದ್ದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಬೆಳಗಿನ ಜಾವ 4.30ರ ಸಮಯದಲ್ಲಿ ಹಿಡಿಯಲು ಪ್ರಯತ್ನಿಸುವ ವೇಳೆ ಪೇದೆ ನಿಘಪ್ಪ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ್ದಾನೆ. ಅದನ್ನು ತಡೆಯಲು ಹೋದ  ಸಬ್ ಇನ್ಸ್ ಪೆಕ್ಟರ್ ಬಸವರಾಜ್ ಪಾಟೀಲ್ ಮೇಲೆಯೂ ಡ್ಯಾಗರ್‌ನಿಂದ ಹಲ್ಲೆಗೆ ಯತ್ನಿಸಿ ಎಸ್ಕೇಪ್‌ ಆಗಲು ಯತ್ನಿಸಿದ್ದಾನೆ.  ಆತ್ಮರಕ್ಷಣೆಗಾಗಿ ಹನುಮಂತನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್  ಆರೋಪಿ ಕಾಲಿಗೆ ಫೈರಿಂಗ್ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ನನ್ನನ್ನ ಹಿಡಿಯೋಕೆ ಆಗಲ್ಲ ಅಂತ ಪೊಲೀಸರಿಗೆ ಆವಾಜ್‌ ಹಾಕಿದ್ದ. ತನ್ನ ಎದುರಾಳಿ ಬೇಕರಿ ರಘು ಎಂಬಾತನನ್ನು ಕೊಲೆ ಮಾಡಿದ ಬಳಿಕವೇ ನಾನು ಸರೆಂಡರ್‌ ಆಗ್ತೀನಿ. ಅಲ್ಲಿವರೆಗೂ ಪೊಲೀಸರು ಸುಮ್ಮನೆ ನೋಡ್ತಾ ಇರಬೇಕು. ಈ ಹಿಂದೆಯೂ ಬೇಕರಿ ರಘು ಮೇಲೆ ಹತ್ಯಾ ಪ್ರಯತ್ನ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿ ರಾಹುಲ್‌ ಕೃಷ್ಣನ ಜನ್ಮಸ್ಥಳಕ್ಕೆ ಸೇರಿದ್ದಾನೆ.

 

 

Share Post