Districts

ಲಾರಿ ಮತ್ತು ಎತ್ತಿನ ಗಾಡಿ ನಡುವೆ ಡಿಕ್ಕಿ : ಚಾಲಕ, 3 ಎತ್ತುಗಳು ಸಾವು

ಹಾವೇರಿ : ಹಾವೇರಿ ತಾಲೂಕಿನ ಸಂಗೂರು ಗ್ರಾಮದ ಬಳಿ ಲಾರಿ ಮತ್ತು ಎತ್ತಿನ ಗಾಡಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಎತ್ತಿನ ಬಂಡಿ ಚಾಲಕ ಮೂರ್ತಿ ಲಮಾಣಿ (33) ಮತ್ತು ಮೂರು ಎತ್ತುಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

ಮೂರ್ತಿ ಲಮಾಣಿಯವರು ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಧೂಪದಹಳ್ಳಿ ತಾಂಡಾದವರಾಗಿದ್ದಾರೆ. ಸಂಗೂರು ಕಾರ್ಖಾನೆ ಕಬ್ಬು ಸಾಗಿಸಿ ಹಿಂದಿರುಗುವಾಗ ಈ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಅಪಘಾತ ನಡೆದ ಜಾಗದಿಂದ ಲಾರಿ ಚಾಲಕ ಕಾಲ್‌ಕಿತ್ತಿದ್ದಾನೆ. ಇನ್ನು ಎತ್ತಿನ ಬಂಡಿಯಲ್ಲಿ ಸಂಚರಿಸುತ್ತಿದ್ದ ಮತ್ತಿಬ್ಬರಿಗೆ ಗಾಯಗಳಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ನಡೆದ ಸ್ಥಳಕ್ಕೆ ಹಾವೇರಿ ಗ್ರಾಮೀಣ ಪೊಲೀಸ್‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಚಾಲಕನ ಹುಡುಕಾಟಕ್ಕೆ ಮುಂದಾಗಿದ್ದಾರೆ.

Share Post