Crime

ತೆಲಂಗಾಣದಲ್ಲಿ ಭೀಬತ್ಸ ಘಟನೆ; ದೇವಿ ಪಾದದ ಮುಂದೆ ವ್ಯಕ್ತಿಯ ತಲೆ ಪತ್ತೆ..!

ಹೈದರಾಬಾದ್‌: ತೆಲಂಗಾಣದ ನೆಲ್ಗೊಂಡ ಜಿಲ್ಲೆ ಚಿಂತಲಪಲ್ಲಿ ಮಂಡಲ್‌ ಗೊಲ್ಲಪಲ್ಲಿಯಲ್ಲಿ ಭೀಬತ್ಸ ಘಟನೆ ನಡೆದಿದೆ. ವ್ಯಕ್ತಿಯೊಬ್ಬರನ್ನು ಕೊಲೆಗೈದಿರುವ ದುಷ್ಕರ್ಮಿಗಳು, ಆತನ ತಲೆಯನ್ನು ತಂದು ಮಹಾಕಾಳಿ ದೇವಿಯ ಪಾದದ ಬಳಿ ಇಟ್ಟುಹೋಗಿದ್ದಾರೆ. ಇಂದು ಬೆಳಗ್ಗೆ ಗೊಲ್ಲಪಲ್ಲಿ ಗ್ರಾಮಸ್ಥರು ಅದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.

ಕೊಲೆಯಾದ ವ್ಯಕ್ತಿ 35 ವರ್ಷದ ಆಸುಪಾಸಿನ ವ್ಯಕ್ತಿ ಎಂದು ತಿಳಿದುಬಂದಿದೆ. ಆದ್ರೆ ಕೊಲೆಯಾದ ವ್ಯಕ್ತಿಯ ಗುರುತು ಇನ್ನೂ ಸಿಕ್ಕಿಲ್ಲ. ಕೊಲೆಯಾದ ವ್ಯಕ್ತಿ ತಲೆ ಮಾತ್ರ ದೇವಿಯ ಪಾದದ ಮುಂದೆ ಸಿಕ್ಕಿದೆ. ಆದರೆ ಮುಂಡ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಮುಂಡ ಎಲ್ಲಿದೆ ಎಂಬುದರ ಬಗ್ಗೆ ಪೊಲೀಸರು ಹಡುಕಾಟ ನಡೆಸಿದ್ದಾರೆ.

ವ್ಯಕ್ತಿಯನ್ನು ದೇವಿಯನ್ನು ಬಲಿ ಕೊಟ್ಟರಾ ಅಥವಾ ದ್ವೇಷಕ್ಕಾಗಿ ವ್ಯಕ್ತಿಯನ್ನು ಸಾಯಿಸಿದರಾ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಗೊಲ್ಲಪಲ್ಲಿ ಗ್ರಾಮದ ಹೊರಭಾಗದಲ್ಲಿ ಈ ಮಹಾಕಾಳಿ ದೇವಿ ವಿಗ್ರಹವಿದೆ. ಬಯಲು ಪ್ರದೇಶದಲ್ಲೇ ವಿಗ್ರಹವಿದ್ದು, ವಿಗ್ರಹದ ಪಾದದ ಬಳಿ, ದೇವಿ ತ್ರಿಶೂಲ ಹಿಡಿರುವ ಸ್ಥಳದಲ್ಲಿ ರುಂಡವನ್ನಿಟ್ಟು ಹೋಗಿದ್ದಾರೆ. ಯಾವ ಕಾರಣಕ್ಕಾಗಿ ಹಾಗೂ ಯಾರು ಈ ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share Post